More

    2 ಎಕರೆ ಕಬ್ಬು ಬೆಂಕಿಗಾಹುತಿ

    ಗುತ್ತಲ: ಆಕಸ್ಮಿಕ ಬೆಂಕಿ ಅನಾಹುತದಿಂದ ಸುಮಾರು 2 ಎಕರೆ ಕಬ್ಬಿಗೆ ಹಾನಿಯಾದ ಘಟನೆ ಸಮೀಪದ ಹಾವನೂರ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಗ್ರಾಮದ ನಿಂಗಪ್ಪ ಚ. ಬನ್ನಿಮಟ್ಟಿ ಎಂಬ ರೈತರಿಗೆ ಸೇರಿದ 2 ಎಕರೆ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗಾಳಿಯ ವೇಗಕ್ಕೆ ಬೆಂಕಿ ಪಕ್ಕದ ಕಬ್ಬಿನ ಜಮೀನಿಗೆ ತಗಲುವುದನ್ನು ಅರಿತ ರೈತ, ಬೆಂಕಿ ಹತ್ತಿದ್ದ ಕಬ್ಬಿನ ಗದ್ದೆಯ ಮಧ್ಯದ ಭಾಗದಲ್ಲಿ ಟ್ರ್ಯಾಕ್ಟರ್​ನ ಸಹಾಯದಿಂದ ರೂಟರ್ ಹೊಡೆದ ಕಾರಣ ಬೆಂಕಿ ತಣ್ಣಗಾಗಿ ಹಾನಿ ತಪ್ಪಿದಂತಾಯಿತು. ಅನೇಕ ರೈತರು ಸೇರಿ ಕಬ್ಬಿನ ಗದ್ದೆಗೆ ಹತ್ತಿದ ಬೆಂಕಿ ನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts