ಎಂ.ಕೆ.ಹುಬ್ಬಳ್ಳಿ : ಸ್ಥಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸರ್ಕಾರದ ಆದೇಶದನ್ವಯ ಕಬ್ಬಿನ ತೂಕ ಹಾಗೂ ಸಕ್ಕರೆ ಇಳುವರಿ ಪ್ರಮಾಣ ಪರಿಶೀಲನೆಗಾಗಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ದಿಢೀರ್ ಭೇಟಿ ನೀಡಿದ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರು ಕಾರ್ಮಿಕರ ರಣೆಗೆ ಸುರತಾ ಕ್ರಮ ಮತ್ತು ಸಲಕರಣೆ ಒದಗಿಸದ ಕುರಿತಾಗಿ ಕಾರ್ಖಾನೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು.
ಕಾರ್ಖಾನೆ ನಿರ್ದೇಶಕರು ಕಾರ್ಮಿಕರ ಸುರತೆ ಕೈಗವಸು, ಹೆಲ್ಮೆಟ್ ಸೇರಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. 3 ದಿನಗಳ ನಂತರ ಕಾರ್ಖಾನೆಗೆ ಭೇಟಿ ನೀಡಿ ವರದಿ ಒಪ್ಪಿಸುವಂತೆ ಕಿತ್ತೂರು ತಹಸೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಸೂಚಿಸಿದರು. ಕಬ್ಬಿನ ತೂಕ ಹಾಗೂ ಸಕ್ಕರೆ, ಕಾರ್ಖಾನೆ ದಾಖಲಾತಿ ಹಾಗೂ ಲ್ಯಾಬ್ ವರದಿ ಪರಿಶೀಲಿಸಿದರು. ಸಕ್ಕರೆ ತಯಾರಿಕೆ, ಗುಣಮಟ್ಟ, ಡಿಸ್ಟಿಲರಿ ಟಕ ಸೇರಿ ಎಲ್ಲ ವಿಭಾಗದ ಕಾರ್ಯಚಟುವಟಿಕೆಯ ಮಾಹಿತಿ ಪಡೆದರು ತಹಸೀಲ್ದಾರ್ ರವೀಂದ್ರ ಹಾದಿಮನಿ, ಬೆಳಗಾವಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೇಸಾಯ ಶಾಸದ ಸಹಾಯಕ ಅಧ್ಯಾಪಕ ಆರ್.ಬಿ.ಸುತಗುಂಡಿ, ಆಹಾರ ಇಲಾಖೆಯ ರಾಹುಲ ತಿಗಡಿ, ಎಚ್.ಬಿ.ಪಿರಜಾದೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಬಸವಪ್ರಭು, ಆಡಳಿಯ ಮಂಡಳಿ ನಿರ್ದೇಶಕರು, ರೆತ ಮುಖಂಡರು ಇತರರಿದ್ದರು.