More

    ಕಾರ್ಮಿಕರಿಗೆ ಸುರಕ್ಷತಾ ಸಲಕರಣೆ ಒದಗಿಸಲಿ

    ಎಂ.ಕೆ.ಹುಬ್ಬಳ್ಳಿ : ಸ್ಥಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸರ್ಕಾರದ ಆದೇಶದನ್ವಯ ಕಬ್ಬಿನ ತೂಕ ಹಾಗೂ ಸಕ್ಕರೆ ಇಳುವರಿ ಪ್ರಮಾಣ ಪರಿಶೀಲನೆಗಾಗಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ದಿಢೀರ್​ ಭೇಟಿ ನೀಡಿದ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರು ಕಾರ್ಮಿಕರ ರಣೆಗೆ ಸುರತಾ ಕ್ರಮ ಮತ್ತು ಸಲಕರಣೆ ಒದಗಿಸದ ಕುರಿತಾಗಿ ಕಾರ್ಖಾನೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು.
    ಕಾರ್ಖಾನೆ ನಿರ್ದೇಶಕರು ಕಾರ್ಮಿಕರ ಸುರತೆ ಕೈಗವಸು, ಹೆಲ್ಮೆಟ್​ ಸೇರಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. 3 ದಿನಗಳ ನಂತರ ಕಾರ್ಖಾನೆಗೆ ಭೇಟಿ ನೀಡಿ ವರದಿ ಒಪ್ಪಿಸುವಂತೆ ಕಿತ್ತೂರು ತಹಸೀಲ್ದಾರ್​ ರವೀಂದ್ರ ಹಾದಿಮನಿ ಅವರಿಗೆ ಸೂಚಿಸಿದರು. ಕಬ್ಬಿನ ತೂಕ ಹಾಗೂ ಸಕ್ಕರೆ, ಕಾರ್ಖಾನೆ ದಾಖಲಾತಿ ಹಾಗೂ ಲ್ಯಾಬ್​ ವರದಿ ಪರಿಶೀಲಿಸಿದರು. ಸಕ್ಕರೆ ತಯಾರಿಕೆ, ಗುಣಮಟ್ಟ, ಡಿಸ್ಟಿಲರಿ ಟಕ ಸೇರಿ ಎಲ್ಲ ವಿಭಾಗದ ಕಾರ್ಯಚಟುವಟಿಕೆಯ ಮಾಹಿತಿ ಪಡೆದರು ತಹಸೀಲ್ದಾರ್​ ರವೀಂದ್ರ ಹಾದಿಮನಿ, ಬೆಳಗಾವಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೇಸಾಯ ಶಾಸದ ಸಹಾಯಕ ಅಧ್ಯಾಪಕ ಆರ್​.ಬಿ.ಸುತಗುಂಡಿ, ಆಹಾರ ಇಲಾಖೆಯ ರಾಹುಲ ತಿಗಡಿ, ಎಚ್​.ಬಿ.ಪಿರಜಾದೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಬಸವಪ್ರಭು, ಆಡಳಿಯ ಮಂಡಳಿ ನಿರ್ದೇಶಕರು, ರೆತ ಮುಖಂಡರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts