ಮುಂಬೈ: ತಮ್ಮ ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ 16 ಶಾಸಕರಿಗೆ ಅನರ್ಹ ಅಸ್ತ್ರ ಬಳಸಿರುವ ಶಿವಸೇನೆ ನೋಟೀಸ್ ಜಾರಿ ಮಾಡಿದ್ದು, ಸೋಮವಾರದೊಳಗೆ ಉತ್ತರಿಸಲು ಸೂಚಿಸಿದೆ.
ರೆಬೆಲ್ ನಾಯಕ ಏಕನಾಥ್ ಶಿಂಧೆ ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವ 16 ಶಾಸಕರಿಗೆ ಉಪಸಭಾಪತಿಯಿಂದ ಶನಿವಾರ ಅನರ್ಹತೆ ನೋಟಿಸ್ ನೀಡಲಾಗಿದೆ. ಸೋಮವಾರ ಸಂಜೆ 5.30ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. 16ರ ಪಟ್ಟಿಯಲ್ಲಿ ಶಿಂಧೆ ಹೆಸರಿದೆ.
ಅನರ್ಹತೆಯಿಂದ 16 ಶಾಸಕರು ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಏಕನಾಥ್ ಶಿಂಧೆ ಅವರೂ ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಇದರಿಂದ ನಿರ್ಣಾಯಕವಾಗಿ ಅವರ ಸರ್ಕಾರ ರಚಿಸುವ ಕನಸು ಭಗ್ನಗೊಳ್ಳಲಿದೆ ಎಂಬುದು ಶಿವಸೇನೆಯ ರಾಜಕೀಯ ಲೆಕ್ಕಾಚಾರವಾಗಿದೆ.
ಇದರಲ್ಲಿ ಇಬ್ಬರು ಸ್ವತಂತ್ರ ಶಾಸಕರಾದ ಮಹೇಶ್ ಬಾಲ್ಡಿ ಮತ್ತು ವಿನೋದ್ ಅಗರ್ವಾಲ್ ಅವರು ಬಿಜೆಪಿಗೆ ಹತ್ತಿರವಾಗಿದ್ದು, ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಇನ್ನೂ ಬಾಕಿ ಇದೆ. ಮತ್ತು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಪ್ರತಿಯಾಗಿ ನೋಟಿಸ್ ನೀಡಿದ್ದಾರೆ. (ಏಜೆನ್ಸೀಸ್)
ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!