More

    ಶಿವಸೇನೆಯಿಂದ ಅನರ್ಹ ಅಸ್ತ್ರ: 16 ಬಂಡಾಯ ಶಾಸಕರಿಗೆ ನೋಟಿಸ್​, ಸೋಮವಾರದೊಳಗೆ ಉತ್ತರಿಸಲು ಸೂಚನೆ

    ಮುಂಬೈ: ತಮ್ಮ ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ 16 ಶಾಸಕರಿಗೆ ಅನರ್ಹ ಅಸ್ತ್ರ ಬಳಸಿರುವ ಶಿವಸೇನೆ ನೋಟೀಸ್​ ಜಾರಿ ಮಾಡಿದ್ದು, ಸೋಮವಾರದೊಳಗೆ ಉತ್ತರಿಸಲು ಸೂಚಿಸಿದೆ.

    ರೆಬೆಲ್​ ನಾಯಕ ಏಕನಾಥ್​ ಶಿಂಧೆ ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವ 16 ಶಾಸಕರಿಗೆ ಉಪಸಭಾಪತಿಯಿಂದ ಶನಿವಾರ ಅನರ್ಹತೆ ನೋಟಿಸ್​ ನೀಡಲಾಗಿದೆ. ಸೋಮವಾರ ಸಂಜೆ 5.30ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. 16ರ ಪಟ್ಟಿಯಲ್ಲಿ ಶಿಂಧೆ ಹೆಸರಿದೆ.

    ಅನರ್ಹತೆಯಿಂದ 16 ಶಾಸಕರು ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಏಕನಾಥ್​ ಶಿಂಧೆ ಅವರೂ ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಇದರಿಂದ ನಿರ್ಣಾಯಕವಾಗಿ ಅವರ ಸರ್ಕಾರ ರಚಿಸುವ ಕನಸು ಭಗ್ನಗೊಳ್ಳಲಿದೆ ಎಂಬುದು ಶಿವಸೇನೆಯ ರಾಜಕೀಯ ಲೆಕ್ಕಾಚಾರವಾಗಿದೆ.

    ಇದರಲ್ಲಿ ಇಬ್ಬರು ಸ್ವತಂತ್ರ ಶಾಸಕರಾದ ಮಹೇಶ್​ ಬಾಲ್ಡಿ ಮತ್ತು ವಿನೋದ್​ ಅಗರ್ವಾಲ್​​ ಅವರು ಬಿಜೆಪಿಗೆ ಹತ್ತಿರವಾಗಿದ್ದು, ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಇನ್ನೂ ಬಾಕಿ ಇದೆ. ಮತ್ತು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಪ್ರತಿಯಾಗಿ ನೋಟಿಸ್ ನೀಡಿದ್ದಾರೆ. (ಏಜೆನ್ಸೀಸ್​)

    ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts