More

    ಬುಡಕಟ್ಟು ವ್ಯಕ್ತಿಯ ಹತ್ಯೆ ಪ್ರಕರಣ; 13 ಮಂದಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

    ಪಾಲಕ್ಕಾಡ್​: ಅಂಗಡಿ ಒಂದರಲ್ಲಿ ಆಹಾರ ಪದಾರ್ಥ ಕಳ್ಳತನ ಮಾಡಿದ್ಧಾರೆ ಎಂದು ಆರೋಪಿಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು 13 ಮಂದಿ ಆರೋಪಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

    ಅಟ್ಟಪಡಿ ನಿವಾಸಿ ಮಧು ಎಂಬುವವರನ್ನು ಗುಂಪೊಂದು 22 ಫೆಬ್ರವರಿ 2018ರಲ್ಲಿ ಹೊಡೆದು ಕೊಂದಿತ್ತು. ಪೊಲೀಸ್​ ತನಿಖೆ ಬಳಿಕ ಐದು ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ಭಾಗಿಯಾಗಿದ್ದ 13 ಮಂದಿಯನ್ನು ದೋಷಿ ಎಂದು ಪರಿಗಣಿಸಿ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಪ್ರಮಾಣವನ್ನು ನ್ಯಾಯಮೂರ್ತಿ ಕೆ.ಎಂ.ರತೀಶ್​ ಕುಮಾರ್​ ಪ್ರಕಟಿಸಿದ್ದಾರೆ.

    ಬುಡಕಟ್ಟು ವ್ಯಕ್ತಿಯ ಹತ್ಯೆ ಪ್ರಕರಣ; 13 ಮಂದಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

    ಇದನ್ನೂ ಓದಿ: ಗಾಂಧೀಜಿ, ಹಿಂದೂ-ಮುಸ್ಲಿಂ ಭಾವೈಕ್ಯತೆ, RSS ನಿಷೇಧ ಕುರಿತ ಅಂಶಗಳನ್ನು ಕೈ ಬಿಟ್ಟ NCERT; ವ್ಯಾಪಕ ಖಂಡನೆ

    ಈ ಕುರಿತು ಪ್ರತಿಕ್ರಿಯಿಸಿರುವ ವಕೀಲರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು. 7 ವರ್ವ ಶಿಕ್ಷೆಗೆ ಗುರಿಯಾಗಿಸಿರುವ ಬಗ್ಗೆ ಬೇಸರವಿದೆ ಈ ಕುರಿತು ರಾಜ್ಯ ಸರ್ಕಾರ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುವ ವಿಶ್ವಾಸವಿದೆ ಎಂದು ಪಬ್ಲಿಕ್​ ಪ್ರಾಸಿಕ್ಯೂಟರ್​ ರಾಜೇಶ್​ ಮೆನನ್ ಹೇಳಿದ್ಧಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಧು ಸಹೋದರಿ ಆರೋಪಿಗಳಿಗೆ ನೀಡಿರುವ ಶಿಕ್ಷೆ ನಮಗೆ ತೃಪ್ತಿಕರವಾಗಿಲ್ಲ. ನಿಜವಾಗಿ ಏನಾಗಿದೆ ಎಂಬುದು ನ್ಯಾಯಾಲಯಕ್ಕೆ ತಿಳಿದು ಬಂದಿಲ್ಲ. ನ್ಯಾಯಾಲಯವು ನಮ್ಮ ಹಿತಾಸಕ್ತಿಗಳನ್ನು ಕಾಪಾಡುತದೆಂದು ಉದ್ದೇಶಿಸಲಾಗಿತ್ತು. ಆದರೆ, ಅದು ನಡೆದಿಲ್ಲ ಎಂದು ತೀರ್ಪಿನ ಕುರಿತು ಮಧು ಸಹೋದರಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts