ಕೋಟ: ಸಾಸ್ತಾನ ಪಾಂಡೇಶ್ವರದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 11.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 4.05 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಸಾಸ್ತಾನ ನಿವಾಸಿ ರಾಜೇಶ್ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಂಗಳೂರಿನ ಮಡಿವಾಳದಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿರುವ ರಾಜೇಶ್ ಪೂಜಾರಿ ಮೇ 4 ರಂದು ಮದುವೆ ನಿಮಿತ್ತ ಬೆಂಗಳೂರಿನಿಂದ ಊರಿಗೆ ಬಂದಿದ್ದು, ಬೆಂಗಳೂರಿಗೆ ಮರಳುವಾಗ ಪತ್ನಿ ಹಾಗೂ ಮಗುವಿನ 11.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮನೆಯ ದುರಸ್ತಿಗಾಗಿ 4,05,000 ರೂ. ನಗದನ್ನು ಮೂಲಮನೆ ಸಾಸ್ತಾನ ಪಾಂಡೇಶ್ವರದ ಮನೆಯ ಕಪಾಟಿನಲ್ಲಿ ಇಟ್ಟು ಹೋಗಿದ್ದರು.
ಬುಧವಾರ ರಾಕೇಶ್ ಅವರ ಚಿಕ್ಕಪ್ಪ ಸುಬ್ಬಣ್ಣ ಪೂಜಾರಿ ಎಂಬುವರು ಮನೆಯ ಕಲ್ಲುಕುಟಿಗ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದ ರಾಕೇಶ್ಪೂಜಾರಿ ಮನೆ ಬಾಗಿಲಿಗೆ ಚಿಲಕ ಹಾಕಿ ಲಾಕ್ ಹಾಕದೇ ಇರುವುದು ಕಂಡು ಬಂದಿದೆ. ಈ ಬಗ್ಗೆ ಅವರು ರಾಕೇಶ್ಪೂಜಾರಿ ಅವರ ಗಮಕ್ಕೆ ತಂದಿದ್ದಾರೆ.
ತಕ್ಷಣ ಅವರು ಊರಿಗೆ ಆಗಮಿಸಿ ಪರಿಶೀಲಿಸಿದಾಗ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.