ಬೆಂಗಳೂರು: ಪೊಲೀಸರ ಬಂಧಿಯಾಗಿರುವ ವಂಚಕರಲ್ಲೇ ಮಹಾ ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯ ಮೋಸದ ಬೇರು ಅಗೆದಷ್ಟು ಹಾಳವಾಗುತ್ತಿದ್ದು, ಇದೀಗ ಮತ್ತೊಂದು ಸ್ಫೊಟಕ ವಿಚಾರ ಬೆಳಕಿಗೆ ಬಂದಿದೆ.
ವಂಚಕ ಯುವರಾಜ್ ಮೊಬೈಲ್ನಲ್ಲಿ 108 ಫೋಟೊಗಳು ಪತ್ತೆಯಾಗಿವೆ. ಕನ್ನಡದ ಟಾಪ್ ನಟಿಯರ ಫೋಟೋಗಳಿದ್ದು, ಇವುಗಳೇ ಯುವರಾಜ್ ಅಸ್ತ್ರವಾಗಿದ್ದವು ಎನ್ನಲಾಗಿದೆ.
ಇದನ್ನೂ ಓದಿ: ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್ ಅಧಿಕಾರಿ!
ವಂಚಿಸಲು ತನ್ನ ಮಾತಲ್ಲಿ ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದ ಯುವರಾಜ್, ವಿಫಲವಾದಾಗ ಅಸ್ತ್ರವಾಗಿ ತನ್ನ ಕಾಂಟಾಕ್ಟ್ ಹಾಗೂ ಪೋಟೋಗಳನ್ನು ತೋರಿಸುತ್ತಿದ್ದ. ಅದಕ್ಕೂ ಬಗ್ಗದಿದ್ರೆ ಮೂರನೇ ಅಸ್ತ್ರವಾಗಿ ನಟಿ ಹಾಗೂ ಮಾಡೆಲ್ಗಳ ಫೋಟೋ ಪ್ರಯೋಗ ಮಾಡುತ್ತಿದ್ದ ಎನ್ನಲಾಗಿದೆ. ಸಿಸಿಬಿ ತನಿಖೆ ವೇಳೆ ಯುವರಾಜ್ ತಪ್ಪೋಪ್ಪಿಕೊಂಡಿರುವ ಮಾಹಿತಿ ಇದೆ.
ಇದಕ್ಕೆ ಪೂರಕವಾಗಿ ಅವನ ಮೊಬೈಲ್ ರಿಟ್ರೀವ್ ಸಾಕ್ಷಿ ಹೇಳಿದೆ. ಲೋಕೇಷನ್ಸ್, ಆಡಿಯೋ ಜತೆಗೆ ಈತನ ಸಂಪರ್ಕದಲ್ಲಿದ್ದ ಪೋಟೋಗಳು ಪತ್ತೆಯಾಗಿವೆ. ಬರೋಬ್ಬರಿ 108 ನಟಿಯರು, ಮಾಡೆಲ್ಗಳ ಪೋಟೋಗಳು ಪತ್ತೆಯಾಗಿವೆ. ಜತೆಗೆ ಇವನ ಅಕೌಂಟ್ನಿಂದ ಅವರ ಅಕೌಂಟ್ಗೆ ಹಣ ವರ್ಗಾವಣೆಯಾಗಿದೆ. ಇದೇ ವಿಚಾರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿರಿ: ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್ ನೋಡಿ ಪತ್ನಿಗೆ ಶಾಕ್!
ಫೋಟೋದಲ್ಲಿರುವವರಿಗೂ ಯುವರಾಜ್ನಿಗೂ ಏನು ಸಂಬಂಧ? ಯಾವ ಕಾರಣಕ್ಕೆ ಹಣ ನೀಡಿದ್ದ ಎಂಬ ವಿಚಾರ ರಹಸ್ಯವಾಗಿದೆ. 7 ಮಂದಿ ಜತೆ ಹೆಚ್ಚು ವ್ಯವಹಾರ ಇರುವುದು ಪತ್ತೆಯಾಗಿದೆ. ಸದ್ಯ ಆತನ ವಾಟ್ಸ್ ಚಾಟ್ ಮತ್ತು ಅಕೌಂಟ್ಗಳ ಹೋಲಿಕೆ ನಡೆಸಲಾಗ್ತಿದೆ. ಜತೆಗೆ ಅವರಿಂದ ಹಣ ರಿಕವರಿ ಮಾಡಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್)
ಮಾನವನ ಹೆಬ್ಬೆರಳು ಅಂದುಕೊಂಡು ಪೊಲೀಸರನ್ನು ತಕ್ಷಣ ಕರೆಸಿದ ಮಹಿಳೆಗೆ ಕಾದಿತ್ತು ಬಿಗ್ ಶಾಕ್!
ನಾನು ತುಂಬಾ ಒಳ್ಳೆಯವಳು ಮೇಡಂ… ಆದ್ರೆ ಎಲ್ಲಾ ತಪ್ಪಾಗಿ ಭಾವಿಸ್ತಾರೆ, ಏನ್ ಮಾಡ್ಲಿ?
2020ನೇ ವರ್ಷದಲ್ಲಿ ಹಾಲು ಮಾರಿ ಈಕೆ ಸಂಪಾದಿಸಿದ ಹಣದ ಮೊತ್ತ ಕೇಳಿದ್ರೆ ಬೆಕ್ಕಸ ಬೆರಗಾಗುತ್ತೀರಿ!