More

    ಗಮನ ಸೆಳೆದ 100 ಮೀ. ಕನ್ನಡ ಧ್ವಜ

    ಹುಬ್ಬಳ್ಳಿ: ರಾಜ್ಯೋತ್ಸವ ನಿಮಿತ್ತ ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ಭಾನುವಾರ ಹುಬ್ಬಳ್ಳಿಯಲ್ಲಿ 100 ಮೀ. ಉದ್ದದ ಕೆಂಪು-ಹಳದಿ ವರ್ಣದ ಕನ್ನಡ ಧ್ವಜದ ಮೆರವಣಿಗೆ ನಡೆಸಿ ಗಮನ ಸೆಳೆದರು.

    ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಧ್ವಜದ ಮೆರವಣಿಗೆ ನಡೆಸಲಾಯಿತು. ಕಾರ್ಯಕರ್ತರು ಧ್ವಜವನ್ನು ಮೇಲಕ್ಕೆ ಎತ್ತಿ ಹಿಡಿದಿದ್ದರು. ಸಾರ್ವಜನಿಕರು ಸಹ ಕೈ ಜೋಡಿಸಿದರು.

    ಇದಕ್ಕೂ ಪೂರ್ವ ಪೊಲೀಸರಿಗೆ, ಕನ್ನಡಾಭಿಮಾನಿಗಳಿಗೆ ಕನ್ನಡ ರಕ್ಷೆಯ ಕಂಕಣ ಕಟ್ಟಲಾಯಿತು. ಸೇನೆ ಅಧ್ಯಕ್ಷ ಸಂಜೀವ ದುಮಕನಾಳ, ಸಾತಪ್ ಕುಂಕೂರ, ನಿಂಗಪ್ಪ ಕುರಬರ, ರಮಜಾನ್ ಕಲಂದರ, ಇತರರು ಇದ್ದರು.

    ತಾಯಿ ಭುವನೇಶ್ವರಿಗೆ ಪೂಜೆ

    ಹುಬ್ಬಳ್ಳಿ ಆಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ನೇತೃತ್ವದಲ್ಲಿ ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

    ಆಟೋ ರಿಕ್ಷಾಗೆ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರ ಅಳವಡಿಸಿ ಹೂ ಮಾಲೆ ಹಾಕಲಾಗಿತ್ತು. ಕನ್ನಡ ಧ್ವಜ ರಾರಾಜಿಸುತ್ತಿತ್ತು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕನ್ನಡಾಂಬೆ ಭಾವಚಿತ್ರ ಹೊತ್ತು ಆಟೋ ರಿಕ್ಷಾ ಮೆರವಣಿಗೆ ರದ್ದು ಪಡಿಸಿ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗಿದೆ. ರಫೀಕ್ ಕುಂದಗೋಳ, ಮಹಾವೀರ ಬಿಲಾನಾ, ದುರ್ಗಪ್ಪ ಪೂಜಾರ, ಹನುಮಂತ ಮುಳಗುಂದ, ಜಾಫರ ಕೆರೂರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts