ನಾಗಾನ್: ಮುಸ್ಲಿಂ ಧರ್ಮಗುರುವಿನ ಅಂತ್ಯಕ್ರಿಯೆಲ್ಲಿ ಅಂದಾಜು 10 ಸಾವಿರ ಜನರು ಪಾಲ್ಗೊಂಡಿದ್ದರ ಪರಿಣಾಮವಾಗಿ, ಆ ಸ್ಥಳದ ಸುತ್ತಲಿನ ಮೂರು ಹಳ್ಳಿಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ.
ಈ ಘಟನೆ ನಡೆದಿದ್ದು ಆಸ್ಸಾಂನ ನಾಗಾನ್ ಜಿಲ್ಲೆಯಲ್ಲಿ. ಧರ್ಮಗುರು ಮೌಲಾನಾ ಖೈರುಲ್ ಇಸ್ಲಾಮ್ ಮುಫ್ತಿ ಎಂಬುವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಅನುಯಾಯಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಭಾಗವಹಿಸಿದ್ದವರಿಗೆ ಯಾರಿಗಾದರೂ ಕರೊನಾ ಇದ್ದರೆ ತುಂಬ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಲಿನ ಮೂರು ಹಳ್ಳಿಗಳನ್ನು ಲಾಕ್ಡೌನ್ ಮಾಡಲಾಗಿದೆ.
ಲಾಕ್ಡೌನ್ ಮಾರ್ಗಸೂಚಿಯ ಪ್ರಕಾರ ಅಂತ್ಯಕ್ರಿಯೆಯಲ್ಲಿ ಗರಿಷ್ಠ 20 ಮಂದಿಯಷ್ಟೇ ಪಾಲ್ಗೊಳ್ಳಬಹುದಾಗಿದೆ. ಆದರೆ ಧರ್ಮಗುರುವಿನ ಅಂತಿಮ ಸಂಸ್ಕಾರದಲ್ಲಿ ಎಲ್ಲ ನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.
ಅಂತ್ಯಕ್ರಿಯೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ಅಲ್ಲಿ ಸಾಮಾಜಿಕ ಅಂತರದ ನಿಯಮ ಪಾಲನೆಯಾಗಿಲ್ಲ. ಎಷ್ಟೋ ಜನ ಮಾಸ್ಕ್ ಕೂಡ ಧರಿಸಿಲ್ಲ. ಈ ಧರ್ಮಗುರುವಿನ ಅಂತ್ಯ ಸಂಸ್ಕಾರದಲ್ಲಿ ಸ್ಥಳೀಯ ಹಲವು ಮುಖಂಡರೂ, ರಾಜಕಾರಣಿಗಳೂ ಸಹ ಪಾಲ್ಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇಳಿದಷ್ಟು ಬೆಡ್ಗಳನ್ನು ಕೊಟ್ಟಿಲ್ಲ ಖಾಸಗಿ ಆಸ್ಪತ್ರೆಗಳು; ಚಿಕಿತ್ಸೆ ಕೊಡದಿದ್ರೆ ಕ್ರಿಮಿನಲ್ ಕೇಸ್ ಎಂದ್ರು ಸಚಿವ ಸುಧಾಕರ್
ಖೈರುಲ್ ಇಸ್ಲಾಂ ಅವರು ಆಲ್ ಇಂಡಿಯಾ ಜಮಾತ್ ಉಲೇಮಾ ಮತ್ತು ಆಮೀರ್ ಇ ಶರಿಯಾತ್ನ ಉಪಾಧ್ಯಕ್ಷರೂ ಆಗಿದ್ದವರು. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಶಾಸಕ ಅಮಿನುಲ್ ಇಸ್ಲಾಂ ಅವರ ತಂದೆ. ಹೀಗಾಗಿ ರಾಜಕೀಯ ಮುಖಂಡರೂ ಹಲವರು ಭಾಗವಹಿಸಿದ್ದರು. ಆದರೆ ಅವರೂ ಸಹ ಲಾಕ್ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಇದನ್ನೂ ಓದಿ: ಗರ್ಭಿಣಿಯ ತುಂಬಿದ ಹೊಟ್ಟೆಯನ್ನು ಮುತ್ತಿಕೊಂಡ ಜೇನು ನೊಣಗಳು…; ದಿಗಿಲಾಗುವಂಥ ಫೋಟೋ ವೈರಲ್
ಶಾಸಕ ಅಮಿನುಲ್ ಇಸ್ಲಾಂ ಅವರು ಮಾತನಾಡಿ, ನನ್ನ ತಂದೆಗೆ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರು ಇದ್ದಾರೆ. ನಾವು ಅವರ ಅಂತ್ಯಕ್ರಿಯೆಯ ಬಗ್ಗೆ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದೆವು. ಇಷ್ಟೆಲ್ಲ ಜನರು ಬರಬಹುದು ಎಂಬ ನಿರೀಕ್ಷೆ ನಮಗೂ ಇರಲಿಲ್ಲ. ಪೊಲೀಸರು ಎಷ್ಟೋ ವಾಹನಗಳನ್ನು ತಡೆದು ವಾಪಸ್ ಕಳಿಸಿದ್ದಾರೆ. ಆದರೂ ಇಷ್ಟು ಜನರು ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಧರ್ಮಗುರುವಿನಿ ಅಂತ್ಯಕ್ರಿಯೆಯಲ್ಲಿ ಸುಮಾರು 10,000 ಜನರು ಪಾಲ್ಗೊಂಡಿದ್ದರು ಎಂದು ಜಿಲ್ಲಾಧಿಕಾರಿ ಜಾದವ್ ಸೈಕಿಯಾ ತಿಳಿಸಿದ್ದಾರೆ. ಅಂತ್ಯಕ್ರಿಯೆ ವೇಳೆ ಕಾನೂನು ಸುವ್ಯವಸ್ಥೆ ಹದಗೆಡಿಸುವ ಯಾವುದೇ ಘಟನೆ ನಡೆದಿಲ್ಲ. ಆದರೆ ಲಾಕ್ಡೌನ್ ನಿಯಮಗಳು ಪೂರ್ತಿಯಾಗಿ ಉಲ್ಲಂಘನೆಯಾಗಿದೆ. ಹಾಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡುವುದಿಲ್ಲ. ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)
‘ಜ್ವಾಲಾಮುಖಿಯ ಮೇಲೆ ಕುಳಿತಂಥ ಅನುಭವ ಆಗುತ್ತಿದೆ…’ ತಿರುವನಂತಪುರದ ಸ್ಥಿತಿ ನೋಡಿ ಸಚಿವರ ಅಳಲು