More

    ಹೊತ್ತಿ ಉರಿದ ಆಸ್ಪತ್ರೆ ಐಸಿಯು: 10 ಕರೊನಾ ರೋಗಿಗಳು ಬೆಂಕಿಗೆ ಆಹುತಿ

    ಅಹಮದ್​ನಗರ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ 10 ಜನ ಕರೊನಾ ರೋಗಿಗಳು ಸಾವಪ್ಪಿರುವ ಘಟನೆ ಇಂದು ನಡೆದಿದೆ. ಅಹಮದ್​​ನಗರ್​ ಜಿಲ್ಲಾಸ್ಪತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಉಂಟಾಯಿತು. ಐಸಿಯುನಲ್ಲಿ ಅಡ್ಮಿಟ್​ ಆಗಿದ್ದ 25 ಜನ ರೋಗಿಗಳಲ್ಲಿ ಇನ್ನೂ ಆರು ಜನರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

    ಇಂದು ಬೆಳಿಗ್ಗೆ 11 ಗಂಟೆಯ ವೇಳೆಗೆ ಬೆಂಕಿ ಹತ್ತಿಕೊಂಡಿತು ಎಂದು ಅಹಮದ್​​ನಗರ ಮುನಿಸಿಪಾಲಿಟಿಯ ಅಧಿಕಾರಿ ಶಂಕರ್​ ಮಿಸಲ್​​ ಹೇಳಿದ್ದಾರೆ. ಈ ದುರ್ಘಟನೆಯಲ್ಲಿ 10 ಕರೊನಾ ಸೋಂಕಿತರು ಸಾವಪ್ಪಿದ್ದಾರೆ ಎಂದು ಡಿಸಿ ರಾಜೇಂದ್ರ ಭೋಸ್ಲೆ ತಿಳಿಸಿದ್ದಾರೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್​ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಈ ಅಗ್ನಿ ದುರಂತದ ಬಗ್ಗೆ ಆಳವಾದ ತನಿಖೆ ನಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. (ಏಜೆನ್ಸೀಸ್)

    ಥಿಯೇಟರ್​​ನ ಗೋಡೆಯೊಳಗೆ ಸಿಕ್ಕಿಕೊಂಡಿದ್ದ ಬೆತ್ತಲೆ ಮನುಷ್ಯ!

    ರಾಜ್ಯದಲ್ಲಿ ತಗ್ಗಿದ ಕರೊನಾ: 11 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts