More

    10 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ


    ಸವಣೂರ: ಜಮೀನಿನ ವ್ಯಾಜ್ಯ ಕುರಿತು ಉಪ ವಿಭಾಗಾಧಿಕಾರಿಗಳ ಕಚೇರಿಯಿಂದ ಆಗಿದ್ದ ಆರ್‌ಟಿಸಿ ಆದೇಶ ಪ್ರತಿ ನೀಡಲು 15 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಇಲ್ಲಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದಿದೆ.

    ಉಪ ವಿಭಾಗಾಧಿಕಾರಿಗಳ ಕಚೇರಿಯ ಕೇಸ್ ವರ್ಕರ್ ತೇಜಸ್ವಿಕುಮಾರ ನೆಗಳೂರು (39) ಲೋಕಾಯುಕ್ತ ಬಲೆಗೆ ಬಿದ್ದ ನೌಕರ.

    ಈತ ಹುರಳಿಕುಪ್ಪಿ ಗ್ರಾಮದ ಗ್ಡುಡಪ್ಪ ನಿಂಗಪ್ಪ ದೊಡ್ಡಮನಿ ಎಂಬುವರಿಗೆ ಜಮೀನಿನ ವ್ಯಾಜ್ಯ ಕುರಿತು ಉಪ ವಿಭಾಗಾಧಿಕಾರಿಗಳಿಂದ ಆದೇಶವಾಗಿದ್ದ ಆರ್‌ಟಿಸಿ ಪ್ರತಿ ನೀಡಲು 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಕೊನೆಯಲ್ಲಿ 10 ಸಾವಿರ ರೂ.ಗೆ ಒಪ್ಪಿಕೊಂಡು ಗುಡ್ಡಪ್ಪ ಅವರಿಂದ ಹಣ ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಕೈಗೊಂಡಿದ್ದಾರೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts