More

    ಹೃದಯ ತಪಾಸಣೆಗೆ ಒಳಗಾದ ಜಮೀರ್

    ಚಿತ್ರದುರ್ಗ: ಸಚಿವ ಜಮೀರ್ ಅಹಮ್ಮದ್ ಖಾನ್ ಆರೋಗ್ಯದಲ್ಲಿ ಸೋಮವಾರ ದಿಢೀರ್ ಏರು-ಪೇರಾಗಿದ್ದು, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಇಂಡಿಯಾನ ಆರ್ಟ್ ಸೆಂಟರ್‌ನಲ್ಲಿ ಹೃದಯ ತಪಾಸಣೆಗೆ ಒಳಗಾದರು.

    ತುಮಕೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಮುಗಿಸಿ, ಚಿತ್ರದುರ್ಗ ಪ್ರವೇಶಿಸಿದ ವೇಳೆ ಮಧ್ಯಾಹ್ನ 3.30ಕ್ಕೆ ಜಮೀರ್ ಅವರಿಗೆ ಎದೆ, ಬೆನ್ನು ನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಾದರು.

    ಮಧ್ಯಾಹ್ನ 3.40ಕ್ಕೆ ಪರೀಕ್ಷೆ ಆರಂಭಿಸಿದ ಸೆಂಟರ್‌ನ ಹೃದಯ ತಜ್ಞ ಡಾ.ಆರ್.ಎಸ್.ಕಾರ್ತಿಕ್ ನೇತೃತ್ವದ ವೈದ್ಯಕೀಯ ತಂಡ ಇಸಿಜಿ, ಎಕೋ, ಎಚ್.ಎಸ್.ಟ್ರಾಪ್ಟಿ, ಟ್ರಾಪೊಲಿನ್ ಟಿ ಸೇರಿ ಇನ್ನಿತರೆ ಪರೀಕ್ಷೆಗಳನ್ನು ಸಂಜೆ 4.30ರವರೆಗೂ ನಡೆಸಿತು.

    ಪರೀಕ್ಷಾ ವರದಿಯಲ್ಲಿ ಎಲ್ಲವೂ ನಾರ್ಮಲ್ ಬಂದ ಕಾರಣ ಚಿತ್ರದುರ್ಗದ ಕಾಂಗ್ರೆಸ್ ಸಭೆಯಲ್ಲಿ ಭಾಗಿಯಾಗಲು ಅಲ್ಲಿಂದ ಹೊರಟರು. 2019ರಲ್ಲಿ ಹೃದಯಾಘಾತ ಆಗಿದ್ದು, ಸ್ಟಂಟ್ ಅಳವಡಿಕೆ ಆಗಿದೆ. ಅಲ್ಲಿಂದ ಈವರೆಗೂ ಎದೆ ನೋವು ಕಾಣಿಸಿಕೊಂಡಿಲ್ಲ ಎಂದು ತಪಾಸಣೆ ನಡೆಸಿದ ವೈದ್ಯರ ಬಳಿ ಜಮೀರ್ ಹೇಳಿದ್ದಾರೆ ಎಂಬ ಮಾಹಿತಿ ಇದೆ.

    ಆಯಾಸ ಆಗಿದ್ದರಿಂದಾಗಿ ಯಾವುದಕ್ಕೂ ಒಮ್ಮೆ ಪರೀಕ್ಷೆ ಮಾಡಿಸಬೇಕೆನಿಸಿತು. ಹೀಗಾಗಿ ತಪಾಸಣೆಗೆ ಒಳಗಾದೆ. ವರದಿಯಲ್ಲಿ ಎಲ್ಲವೂ ನಾರ್ಮಲ್ ಎಂಬ ರಿಪೋರ್ಟ್ ಬಂದಿದೆ. ಬೆಂಗಳೂರಿಗೆ ಹೋದ ಬಳಿಕ ವೈದ್ಯರ ಸಲಹೆ ಮೇರೆಗೆ ಟಿಎಂಟಿ ಪರೀಕ್ಷೆ ಮಾಡಿಸುತ್ತೇನೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.

    ಆಸ್ಪತ್ರೆಯ ಅಧೀಕ್ಷಕ ಡಾ.ಎಲ್.ಪಾಲಾಕ್ಷಪ್ಪ, ಸಿಎಂಒ ಡಾ.ಅಶೋಕ್ ರೆಡ್ಡಿ, ಸೆಂಟರ್‌ನ ಸಿಬ್ಬಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts