More

    ಹಿರಿಯರ ತ್ಯಾಗದಿಂದ ಪಕ್ಷ ಬಲಿಷ್ಠ

    ಬೈಲಹೊಂಗಲ: ಹಿರಿಯ ನಾಯಕರ ಪರಿಶ್ರಮ ಹಾಗೂ ತ್ಯಾಗದಿಂದ ಬಿಜೆಪಿ ಇಂದು ಬಲಿಷ್ಠವಾಗಿ ಬೆಳೆದು ನಿಂತಿದೆ. ಇದರಿಂದ ಗ್ರಾಪಂದಿಂದ ಹಿಡಿದು ರಾಜ್ಯ ಹಾಗೂ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ ಎಂದು ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು.

    ನಗರದ ವಿದ್ಯಾನಗರದ ಅವರ ಗೃಹ ಕಚೇರಿಯಲ್ಲಿ ಮಂಡಲದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿಯ 42ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಂಡಲ ನಿಕಟಪೂರ್ವ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮಲ್ಲಿಕಾರ್ಜುನ ದೇಸಾಯಿ, ಜಿಲ್ಲಾ ಉಪಾಧ್ಯಕ್ಷೆ ರತ್ನಾ ಗೋದಿ, ಸಂಜು ಗಿರೆಪ್ಪಗೌಡರ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂತಾ ಮಡ್ಡಿಕರ, ರೈತ ಮೋರ್ಚಾ ಅಧ್ಯಕ್ಷ ರಾಜು ಕುಡಸೋಮನ್ನವರ, ಪುರಸಭೆ ಸದಸ್ಯರಾದ ಸುಧೀರ ವಾಲಿ, ಜಗದೀಶ ಜಂಬಗಿ, ಶ್ರೀದೇವಿ ದೇವಲಾಪುರ, ಮಹಾಂತೇಶ ಗುಂಡ್ಲೂರ, ಬಸನಗೌಡ ಸಂಗನಗೌಡರ, ಈಶ್ವರ ಬೋರಕನವರ, ಬಸವರಾಜ ಭಜಂತ್ರಿ, ಚನ್ನಬಸಪ್ಪ ಈಟಿ, ಈಶ್ವರ ಮತ್ತಿಕೊಪ್ಪ, ವಿರೂಪಾಕ್ಷ ಬಡ್ಡಿಮನಿ, ಶ್ರೀಶೈಲ ಶರಣಪ್ಪನವರ, ಉಳವಪ್ಪ ಶೆಟಗಾರ, ರಮೇಶ ಯಲ್ಲಪ್ಪಗೌಡರ, ರಾಜು ಕಾಜಗಾರ, ಈರಣ್ಣ ಶಿಂಗಾರಿ, ಶಿವಾನಂದ ಗಾಣಗಿ, ರಾಮನಗೌಡ ಪಾಟೀಲ, ಚಂದ್ರಶೇಖರ ಕೊಪ್ಪದ, ಗಂಗಾಧರ ಹರಕುಣಿ, ಬಸವರಾಜ ಶಿಂತ್ರಿ, ರಾಜು ಕಾಜಗಾರ, ಶಿವಪ್ರಸಾದ ಪಾಟೀಲ, ರಾಘು ಶೀಗಿಹಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts