ಚಿತ್ರದುರ್ಗ: ನಗರದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಬೃಹನ್ಮಠ ಪ್ರೌಢಶಾಲೆಯ 1995-98ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಬೃಹನ್ಮಠ ಸಂಯುಕ್ತ ಪಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ.ಸಿ.ಮುರುಗೇಂದ್ರಯ್ಯ, ಶಾಲೆಯ ನಿವೃತ್ತ ಶಿಕ್ಷಕರಾದ ಡಿ. ಬಸವರಾಜಪ್ಪ, ಬಸವರಾಜ ಎಸ್ ಗಡ್ದೆಪ್ಪನವರ, ಸಿ.ಎಂ.ಸಾವಿತ್ರಿ, ಗಂಗಮ್ಮ, ಹಳೆಯ ವಿದ್ಯಾರ್ಥಿಗಳಾದ ಉಮೇಶ್ ನಾಯ್ಕ್, ಮೋಹನ್, ಮಾರುತಿ, ಉಪನ್ಯಾಸಕರಾದ ಡಾ.ಎಸ್.ಕೆ.ಯೋಗಾನಂದ, ಡಾ.ಗುರುಸ್ವಾಮಿ, ಡಾ.ಕವಿತಾ, ಉದ್ಯಮಿಗಳಾದ ಎಂ.ಎಸ್.ರವಿಕುಮಾರ್, ಎಂ.ಸ್ವಾಮಿ, ವಿ.ಎಂ.ಗೋವಿಂದರಾಜು, ಶ್ಯಾಮ್, ಶಿಕ್ಷಕಿಯರಾದ ಸವಿತಾ, ಲಲಿತಾ, ಯಶಸ್ವಿನಿ ಇತರರಿದ್ದರು.