More

    ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಿರಿಕಿರಿ



    ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿ ಸೇತುವೆಯಿಂದ ಶಿಂಗಟಾಲೂರಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

    ಕೊರ್ಲಹಳ್ಳಿ ಭಾಗದಿಂದ ಗಂಗಾಪುರವರೆಗಿನ ಅಂದಾಜು 2 ಕಿಮೀನಷ್ಟು ರಸ್ತೆ ಹದಗೆಟ್ಟಿದೆ. ಗಂಗಾಪುರದಿಂದ ಶಿಂಗಟಾಲೂರವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ. ಮಳೆ ಬಂದರಂತೂ ರಸ್ತೆಯೆಲ್ಲ ಕೆಸರಿನಗದ್ದೆಯಂತಾಗುತ್ತದೆ. ಈ ಹದಗೆಟ್ಟ ರಸ್ತೆಯಲ್ಲಿ ಹತ್ತಾರು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ನಿತ್ಯ ಒಂದಿಲ್ಲೊಂದು ಅಪಘಾತಕ್ಕೆ ಸಾಕ್ಷಿಯಾಗುವ ಈ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಶಿಂಗಟಾಲೂರ ಗ್ರಾಪಂ ಅಧ್ಯಕ್ಷ ಮಂಜುನಾಥ ಮುಂಡವಾಡ, ಕೊರ್ಲಹಳ್ಳಿ ಹಾಗೂ ಗಂಗಾಪುರ ಗ್ರಾಮದ ನಾಗರಾಜ ಅರ್ಕಸಾಲಿ, ದೇವೇಂದ್ರ ಸೂಲಿ ಇತರರು ಒತ್ತಾಯಿಸಿದ್ದಾರೆ.

    ಕೊರ್ಲಹಳ್ಳಿ ಸೇತುವೆ ಬಳಿಯಿಂದ ಗಂಗಾಪುರ ರಸ್ತೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಒಟ್ಟು 630 ಮೀಟರ್ ಸಿಸಿ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲಾಗುವುದು. ಇನ್ನುಳಿದ ರಸ್ತೆಗಳನ್ನು ಹಂತಹಂತವಾಗಿ ದುರಸ್ತಿಪಡಿಸಲಾಗುವುದು.

    | ರಾಮಮೂರ್ತಿ ಎ. ಲೋಕೋಪಯೋಗಿ ಇಲಾಖೆ ಎಇಇ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts