More

    ಸ್ವಂತ ಖರ್ಚಲ್ಲೇ ಗುಂಡಿ ಮುಚ್ಚಿದರು !

    ಲಕ್ಷ್ಮೇಶ್ವರ: ಪಟ್ಟಣದ ಅಕ್ಕಿಗುಂದ ರಸ್ತೆಗೆ ಹೊಂದಿಕೊಂಡಿರುವ ಯಳವತ್ತಿ ರೈತ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ ಈ ಭಾಗದ ರೈತರೇ ಮಂಗಳವಾರ ತಮ್ಮ ಸ್ವಂತ ಹಣ ಖರ್ಚು ಮಾಡಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಕೈಗೊಂಡರು.

    ಈ ರೈತ ಸಂಪರ್ಕ ರಸ್ತೆ ಸಂಪೂರ್ಣ ತಗ್ಗುಗುಂಡಿಗಳಿಂದ ಕೂಡಿದ್ದು, ಇದೀಗ ಕೆಸರಿನಿಂದಾಗಿ ಸಂಚಾರ ಸ್ಥಗಿತಗೊಂಡಿದೆ. ಲಕ್ಷ್ಮೇಶ್ವರ ಭಾಗದ ಬಹುತೇಕ ರೈತರ ಜಮೀನುಗಳು ಇದೇ ಮಾರ್ಗದಲ್ಲಿ ಬರುವುದರಿಂದ ರೈತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಜಮೀನಿಗೆ ಹೋಗಿ ಬರಲು ನಿತ್ಯ ಹರಸಾಹಸ, ಸಂಕಷ್ಟ ಅನುಭವಿಸುವಂತ ಸ್ಥಿತಿ ನಿರ್ವಣವಾಗಿತ್ತು. ರೈತರ ಅನುಕೂಲಕ್ಕಾಗಿ ರಸ್ತೆ ಸರಿಪಡಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಮುಕ್ತಿ ಹೊಂದಲು ಈ ಭಾಗದಲ್ಲಿ ಜಮೀನು ಹೊಂದಿರುವ ರೈತರೇ ತಮ್ಮ ಶಕ್ತ್ಯಾನುಸಾರ ಹಣ ಸಂಗ್ರಹಿಸಿ ಅಲ್ಲಲ್ಲಿ ಮಣ್ಣು ಹಾಕಿಸುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ.

    ರೈತರಾದ ಮಲ್ಲಪ್ಪ ಅಂಕಲಿ, ಹಾಶಂಸಾಬ್ ಶಿಗ್ಗಾಂವಿ, ಸಂತೋಷ ಘೊರ್ಪಡೆ, ರಾಮಣ್ಣ ಮುಳಗುಂದ, ಬಸವರಾಜ ಮುಳಗುಂದ, ಮುತ್ತಣ್ಣ ಡಂಬಳ, ರವಿ ಬುರುಡಿ ಇತರರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಈ ರೈತ ಸಂಪರ್ಕ ರಸ್ತೆಯನ್ನು ಕೂಡಲೆ, ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts