More

    ಸೊರಬದ ವಿವಿಧೆಡೆ ಒತ್ತುವರಿ ತೆರವು

    ಸೊರಬ: ತಾಲೂಕಿನ ವಿವಿಧಡೆ ಕಳೆದೆರಡು ದಿನಗಳಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದ ಜಮೀನು ಹಾಗೂ ಕೆರೆ ಒತ್ತುವರಿ ಜಾಗವನ್ನು ತಹಸೀಲ್ದಾರ್ ಪಟ್ಟರಾಜಗೌಡ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

    ತಾಲೂಕಿನ ಉಳವಿ ಹೋಬಳಿ ಅಮಚಿ ಗ್ರಾಮದ ಸರ್ವೆ ನಂ.47ರಲ್ಲಿ ಅಕ್ರಮ ಸಾಗುವಳಿ ಮಾಡುತ್ತಿರುವ ಮಾಹಿತಿ ಮೇರೆಗೆ ಕಂದಾಯ, ಸರ್ವೆ ಹಾಗೂ ಗ್ರಾಪಂ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಸಾಗುವಳಿಗೆ ಮುಂದಾಗಿದ್ದ ದುರ್ಗಪ್ಪ, ಹುಚ್ಚಪ್ಪ ಎಂಬುವರಿಂದ 30 ಗುಂಟೆ ಜಾಗ ವಶಪಡಿಸಿಕೊಂಡಿದ್ದಾರೆ.

    ತಾಲೂಕಿನ ಟಿ.ಜಿ.ಕೊಪ್ಪದ ಊರ ಮುಂದಿನ ಕೆರೆ 13 ಎಕರೆ ವಿಸ್ತೀರ್ಣವಿದ್ದು ಅದರಲ್ಲಿ ಒತ್ತುವರಿ ಆಗಿದ್ದ 8 ಗುಂಟೆಯನ್ನು ಸರ್ವೆ ಇಲಾಖೆ ಅಧಿಕಾರಿಗಳು ತೆರವುಗೊಳಿದರು.

    ಆನವಟ್ಟಿಯ ಸರ್ವೆ ನಂ.74ರ ತಾವರಕೆರೆ 26 ಎಕರೆ 21 ಗುಂಟೆ ವಿಸ್ತೀರ್ಣವಿದ್ದು ಇದರಲ್ಲಿ 1 ಎಕರೆ 20 ಗುಂಟೆ ಒತ್ತುವರಿಯಾಗಿತ್ತು. ಅದನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು 20 ಗುಂಟೆಗೆ ಟ್ರಂಚ್ ಹಾಕಿದ್ದಾರೆ. ಉಳಿದ 1 ಎಕರೆ ಪ್ರದೇಶದಲ್ಲಿ 15-20 ವರ್ಷಗಳ ಹಿಂದೆ 40 ಮನೆಗಳು ನಿರ್ವಣವಾಗಿದ್ದು ಅವುಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಗೆಂಡ್ಲದ ಊರ ಮುಂದಿನ ಕೆರೆಯಲ್ಲಿ 4 ಎಕರೆ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts