More

    ಸಾಮಾಜಿಕ ಸೇವೆಯಿಂದ ನಾ.ಸು. ಅಮರ

    ಯಲ್ಲಾಪುರ: ಹಿರಿಯ ಸಾಹಿತಿ, ಪತ್ರಕರ್ತ ನಾ.ಸು. ಭರತನಹಳ್ಳಿ ಅವರಿಗೆ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶನಿವಾರ ನುಡಿನಮನ ಸಲ್ಲಿಸಲಾಯಿತು.

    ನಾ.ಸು. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಿವೃತ್ತ ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ನಾ.ಸು ಎಂದರೆ ‘ನಾನು ಸುಮ್ಮನಿರುವವನಲ್ಲ’ ಎಂದು ಬದುಕಿನ ರೀತಿಯ ಮೂಲಕ ತೋರಿಸಿಕೊಟ್ಟವರು. ಪತ್ರಕರ್ತ, ಸಾಹಿತಿ, ಶಿಕ್ಷಕ, ಸಹಕಾರಿ ಸೇರಿದಂತೆ ಹಲವು ನೆಲೆಯಲ್ಲಿ ಸಾಮಾಜಿಕ ಸೇವೆಗೈದ ಅವರು ತಮ್ಮ ಕಾರ್ಯಗಳ ಮೂಲಕ ಅಮರರಾಗಿದ್ದಾರೆ ಎಂದರು.

    ನಿವೃತ್ತ ಉಪನ್ಯಾಸಕ ಶ್ರೀರಂಗ ಕಟ್ಟಿ ಮಾತನಾಡಿ, ಒಬ್ಬ ಪತ್ರಕರ್ತ ಹೇಗಿರಬೇಕು ಎಂಬುದನ್ನು ಬದುಕಿ ತೋರಿಸಿದವರು ನಾ.ಸು. ಸದಾ ಸಾಹಿತ್ಯ ಸೇವೆಗೆ ತುಡಿಯುತ್ತಿದ್ದ ಅವರು ಬದುಕಿನಲ್ಲಿ ಕಷ್ಟ-ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಮಾದರಿಯಾಗಿದ್ದರು ಎಂದರು.

    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಉಪಾಧ್ಯಕ್ಷ ಜಿ. ಎನ್. ಭಟ್ಟ ತಟ್ಟಿಗದ್ದೆ, ಖಜಾಂಚಿ ಪ್ರಭಾವತಿ ಗೋವಿ, ಸಹಕಾರ್ಯದರ್ಶಿ ದತ್ತಾತ್ರೇಯ ಕಣ್ಣಿಪಾಲ, ಪತ್ರಕರ್ತರಾದ ಶ್ರೀಧರ ಅಣಲಗಾರ, ಜಯರಾಜ ಗೋವಿ, ಕೇಬಲ್ ನಾಗೇಶ, ನಿವೃತ್ತ ಶಿಕ್ಷಕ ಜಿ.ಎಂ. ತಾಂಡುರಾಯನ್ ಇತರರು ನುಡಿನಮನ ಸಲ್ಲಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts