More

    ಸಹೋದರರ ಸೈಕಲ್ ಯಾತ್ರೆ ಸಂಪನ್ನ

    ಔರಾದ್: ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಹಾಗೂ ಸ್ವಾತಂತ್ರೃದ ನೈಜ ಉದ್ದೇಶ ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ತಾಲೂಕಿನ ಕೊಳ್ಳುರ್ ಗ್ರಾಮದ ಅವಳಿ ಸಹೋದರರಾದ ಅರುಣ ಮತ್ತು ಕರುಣ ರ್ಯಾಕಲೆ ಅವರ ಸೈಕಲ್ ಯಾತ್ರೆ ಸೋಮವಾರ ಸಂಪನ್ನಗೊಂಡಿದೆ.

    ಔರಾದ್​ ಶ್ರೀ ಅಮರೇಶ್ವರ ಸನ್ನಿಧಾನದಿಂದ 3ರಂದು ಹೊರಟ ಸೈಕಲ್ ಯಾತ್ರೆ ಚಾಮರಾಜನಗರ ಜಿಲ್ಲೆಯ ಶ್ರೀ ಮಹದೇಶ್ವರ ಬೆಟ್ಟದವರೆಗೆ ಯಾತ್ರೆ ನಡೆದಿದ್ದು, ರಸ್ತೆಯುದ್ದಕ್ಕೂ ಜನರು ಮಕ್ಕಳ ಸಾಹಸಮಯ ಕೆಲಸಕ್ಕೆ ಮೆಚ್ಚಿಕೊಂಡಿದ್ದಾರೆ. ಅನೇಕ ಜನಪರ, ಸಮಾಜಮುಖಿ ಸಂಘಟನೆಗಳು, ಮಠ-ಮಂದಿರಗಳ ಸಮಿತಿಗಳು ಮಕ್ಕಳಿಗೆ ಗೌರವಿಸಿ ಅವರ ಸತ್ಕಾರ್ಯವನ್ನು ಕೊಂಡಾಡಿದವು.

    ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸೈಕಲ್ ಯಾತ್ರೆ ಮುಕ್ತಾಯಗೊಳಿಸಲಾಗಿದೆ.

    ಸಭಾಪತಿ ಶುಭಹಾರೈಕೆ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಗೌರವಾರ್ಥ ಸೈಕಲ್ ಯಾತ್ರೆ ಹಮ್ಮಿಕೊಂಡ ಮಕ್ಕಳ ಮಹತ್ಕಾರ್ಯದ ಬಗ್ಗೆ ತಿಳಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಕ್ಕಳನ್ನು ವಿಧಾನಸೌಧದ ತಮ್ಮ ಕಚೇರಿಗೆ ಕರೆಸಿಕೊಂಡು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಮಕ್ಕಳೊಂದಿಗೆ ಮಾತುಕತೆ ನಡೆಸಿದ ಅವರು, ದೇಶಪ್ರೇಮದ ಜಾಗೃತಿಗೆ ನಿಮ್ಮ ಯಾತ್ರೆಯ ಸಂಕಲ್ಪ ಸದಾ ಮಾದರಿಯಾಗಲಿದೆ. ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ ದೇಶಕ್ಕೆ ಮಹತ್ವದ ಕಾಣಿಕೆ ನೀಡುವಂತೆ ಶುಭ ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts