More

    ಸರ್ಕಾರದ ಯೋಜನೆ ಸದ್ವಿನಿಯೋಗವಾಗಲಿ

    ಗದಗ: ಗ್ರಾಮಾಂತರ ಭಾಗದಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿರುವ ಹುಲಕೋಟಿ ಬಸ್ ನಿಲ್ದಾಣವನ್ನು ಮಾದರಿಯಾಗಿ ನಿರ್ವಿುಸಲು ಸರ್ಕಾರದ ವಿಶೇಷ ಅನುದಾನದಡಿ ಕಾಮಗಾರಿ ಆರಂಭಿಸಲಾಗಿದೆ. ಈ ಯೋಜನೆ ಸಾರ್ವಜನಿಕರಿಗೆ ಸಮರ್ಪಕವಾಗಿ ಸದ್ವಿನಿಯೋಗವಾಗಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

    ತಾಲೂಕಿನ ಹುಲಕೋಟಿ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಅವರೊಂದಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಈ ವೇಳೆ ಮಾತನಾಡಿದ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ಸಾರಿಗೆ ಸಂಸ್ಥೆಯಿಂದ ಜನರಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದರು.

    ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದ್ದೇವರಮಠ, ಎನ್.ಎಸ್. ಕೋನರಡ್ಡಿ, ಚಂದ್ರಪ್ಪ ಕರಕಟ್ಟಿ, ಎಚ್.ಜಿ. ಹಿರೇಗೌಡ್ರ, ಸಚಿನ ಪಾಟೀಲ, ಪ್ರಲ್ಹಾದಗೌಡ ಪಾಟೀಲ, ಸುರೇಶ ಮಟ್ಟೂರ, ರವಿ ಮೂಲಿಮನಿ, ಹನುಮಂತಪ್ಪ ಪೂಜಾರ, ಶರಣಬಸವಗೌಡ ಪಾಟೀಲ, ರೇಣುಕಾ ಹಡಪದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts