More

    ಸಮುದಾಯಭವನದ ಉದ್ಘಾಟನೆ 21, 22ಕ್ಕೆ – ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ 

    ದಾವಣಗೆರೆ:
    ತಾಲೂಕಿನ ನಾಗರಸನಹಳ್ಳಿಯಲ್ಲಿ ನೂತನ ಶ್ರೀ ವೀರಭದ್ರೇಶ್ವರ ಸಮುದಾಯಭವನದ ಉದ್ಘಾಟನೆ ಹಾಗೂ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯರ ಇಷ್ಟಲಿಂಗ ಮಹಾಪೂಜೆ ಜು.21, 22ರಂದು ನಡೆಯಲಿದೆ.
    ದೇವಸ್ಥಾನ ಸಮಿತಿ ಹಾಗೂ ಭಕ್ತರು ನೀಡಿದ ಕಾಣಿಕೆಯಿಂದ ಒಟ್ಟು 1.50 ಕೋಟಿ ರೂ.ಅಧಿಕ ವೆಚ್ಚದಲ್ಲಿ ಭವನ ನಿರ್ಮಿಸಲಾಗಿದೆ. 500 ಜನರ ಆಸನ ಸಾಮರ್ಥ್ಯದ ಸಭಾಂಗಣ ಹಾಗೂ ಭೋಜನಾಲಯವನ್ನು ಒಳಗೊಂಡಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಎಚ್.ವಿರೂಪಾಕ್ಷಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಜು.21ರ ಬೆಳಗ್ಗೆ 10 ಗಂಟೆಗೆ ರಂಭಾಪುರಿ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿ ಮಹೋತ್ಸವ ಮೂಲಕ ಸ್ವಾಗತಿಸಲಾಗುವುದು. ನಂತರ ಶೀಗಳ ದಿವ್ಯಸಾನ್ನಿಧ್ಯದಲ್ಲಿ ಸಮುದಾಯ ಉದ್ಘಾಟನೆ ಹಾಗೂ ಧರ್ಮಸಭೆ ನಡೆಯಲಿದೆ. ರಾಮಘಟ್ಟದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸುವರು.
    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜವಳಿ ಉದ್ಯಮಿ ಬಿ.ಸಿ.ಉಮಾಪತಿ, ಸಮಿತಿ ಕಾರ್ಯದರ್ಶಿ ಎನ್.ಸಿ. ರುದ್ರಪ್ಪ, ಎಂ.ಆರ್. ವೀರಭದ್ರಪ್ಪ, ಕುಕ್ಕುವಾಡ ಗ್ರಾಪಂ ಅಧ್ಯಕ್ಷೆ ಸೌಭಾಗ್ಯಮ್ಮ ಕೆ.ಎನ್.ಪಾಲಾಕ್ಷಪ್ಪ, ಪಿಡಿಒ ಲಕ್ಷ್ಮೀದೇವಿ, ಲಕ್ಷ್ಮೀ ಶಂಕ್ರಾಚಾರಿ ಇತರರು ಪಾಲ್ಗೊಳ್ಳುವರು.
    ಜು.22ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ರಂಭಾಪುರಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಎಚ್.ಎಸ್.ನಾಗರಾಜ್, ತೇಜಸ್ವಿ ಪಟೇಲ್ ಭಾಗವಹಿಸುವರು ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಎಂ.ಆರ್.ವೀರಭದ್ರಪ್ಪ, ಗುರುಶಾಂತಯ್ಯ, ಬಿ.ವಿ.ಆನಂದಪ್ಪ, ಬಿ.ಆರ್.ಸದಾಶಿವಪ್ಪ, ಡಿ.ವಿ.ಪ್ರಕಾಶ್, ರುದ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts