ಕೊಡಗು : ವಿರಾಜಪೇಟೆ ತಾಲೂಕಿನ ಬಿಲ್ಲವ ಸೇವಾ ಸಮಾಜದ ವತಿಯಿಂದ 168 ನೇ ಶ್ರೀನಾರಾಯಣ ಗುರು ಜಯಂತಿಯನ್ನು ಅಂಬಟ್ಟಿ ಬಿಲ್ಲವ ಸಮಾಜದಲ್ಲಿ ಶನಿವಾರ ಆಚರಿಸಲಾಯಿತು.
ಶ್ರೀ ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಎಂ.ಗಣೇಶ್, ಗೌರವ ಅಧ್ಯಕ್ಷ ಬಿ.ಆರ್.ರಾಜ, ಉಪಾಧ್ಯಕ್ಷ ಪುರುಷೋತಮ್, ಖಜಾಂಚಿ ಬಿ.ಎಂ. ಸತೀಶ್, ಕಾರ್ಯದರ್ಶಿ ಜನಾರ್ದನ್, ಉಪಕಾರ್ಯದರ್ಶಿ ಲಕ್ಷ್ಮಣ್, ಉದ್ಯಮಿಗಳಾದ ಬಿ.ಆರ್. ಬೋಜಪ್ಪ, ಬಿ.ಎಸ್.ನಾರಾಯಣ್, ಬಿ.ಆರ್ . ಲಿಂಗಪ್ಪ ಇತರರು ಇದ್ದರು.