More

    ಶೆಟ್ಟರ್ ಸೇರ್ಪಡೆ ಆಕಸ್ಮಿಕ

    ಚಿತ್ರದುರ್ಗ: ಎಂಎಲ್ಸಿ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿರುವುದು ಆಕಸ್ಮಿಕ, ಅನಿರೀಕ್ಷಿತ ಬೆಳವಣಿಗೆ. ಕಾಂಗ್ರೆಸ್ ಕೈಹಿಡಿದ ನಂತರ ಸೋತರೂ ಎಂಎಲ್ಸಿ ಮಾಡಿ ಗೌರವಯುತವಾಗಿಯೇ ಪಕ್ಷ ನಡೆಸಿಕೊಂಡಿತ್ತು ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ತಿಳಿಸಿದರು.

    ಆದರೂ ಮಾಜಿ ಮುಖ್ಯಮಂತ್ರಿ, ರಾಜಕಾರಣದಲ್ಲಿ ಹಿರಿಯರಾಗಿರುವ ಅವರು ಈ ರೀತಿ ಮಾಡುವ ನಿರೀಕ್ಷೆ ಇರಲಿಲ್ಲ. ಈ ಬೆಳವಣಿಗೆಯಿಂದ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಶಾಸಕ ಲಕ್ಷ್ಮಣ ಸವದಿ ಬಿಜೆಪಿ ಸೇರಲಾರರು ಎಂಬ ವಿಶ್ವಾಸವಿದೆ. ಸದ್ಯದ ಮಟ್ಟಿಗೆ ಆಪರೇಷನ್ ಕಮಲ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದ್ದು, 5 ವರ್ಷ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts