ಎನ್. ಮುನಿವೆಂಕಟೇಗೌಡ ಕೋಲಾರ
ಜಿಲ್ಲೆಯ 6 ತಾಲೂಕು ಮತ್ತು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಸೇರಿ ಒಟ್ಟು 272 ಕೆರೆಗಳಿಗೆ ನೀರು ಹರಿಸಲು ರೂಪಿಸಿರುವ ಮಹತ್ವಾಕಾಂಕ್ಷೆ ಕೆಸಿ ವ್ಯಾಲಿ ಯೋಜನೆಯ 2ನೇ ಹಂತದ ಪೈಪ್ಲೈನ್ ಹಾಗೂ ಪಂಪ್ಹೌಸ್ ಕಾಮಗಾರಿಯು ಪ್ರಗತಿಯಲ್ಲಿದ್ದು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಒಂದನೇ ಹಂತದಲ್ಲಿ 126 ಕೆರೆಗಳಿಗೆ ನೀರು ಹರಿದಿದ್ದು, 2ನೇ ಹಂತದಲ್ಲಿ ಮಂಜೂರಾಗಿರುವ ಕೆರೆಗಳಿಗೆ 446.23 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್ಲೈನ್ ಮತ್ತು ಪಂಪ್ಹೌಸ್ ಕಾಮಗಾರಿ ನಡೆಯುತ್ತಿದ್ದು, ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
8 ತಂಡಗಳಿಂದ ಪೈಪ್ಲೈನ್ ಕಾಮಗಾರಿ: ಮುದುವಾಡಿ ಮತ್ತು ಸೋಮಯಾಜನಪಲ್ಲಿ ಪಂಪ್ಹೌಸ್ ಕಾಮಗಾರಿಗಳು ಶೇ.50ರಷ್ಟು ಪೂರ್ಣಗೊಂಡಿದೆ. 8 ತಂಡಗಳಿಂದ ಎಂಎಸ್ ಪೈಪ್ಲೈನ್ ಅಳವಡಿಸುವ ಕಾಮಗಾರಿ ನಡೆದಿದ್ದು 15 ಕಿ.ಮೀ ಸಾಗಿದೆ. ಯಲ್ದೂರು, ಕೌತನಹಳ್ಳಿ ಬಳಿ ಪಂಪ್ಹೌಸ್ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ನರಸಾಪುರ ಕೆರೆಯಿಂದ ಕಲ್ವಮಂಜಲಿ ಕೆರೆ ಮತ್ತು ಉರಿಗಿಲಿ ಕೆರೆಯವರೆಗೆ ಎಚ್ಡಿಪಿಇ ಪೈಪ್ಲೈನ್ ಅಳವಡಿಸುವ ಕಾಮಗಾರಿಗಳು ಪೂರ್ಣಗೊಂಡಿದೆ. ಈ ತಿಂಗಳಲ್ಲಿಯೇ ಸದರಿ ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.
455 ಕೋಟಿ ರೂ. ವೆಚ್ಚದ ಕಾಮಗಾರಿ: 455 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಯನ್ನು ಆದಿತ್ಯ ಕನ್ಸ್ಟ್ರಕ್ಷನ್ ಕಂಪನಿ, ಶ್ರೀ ರಾವೇಂದ್ರ ಪ್ರಭಾಕರ ಶೆಟ್ಟಿ, ಡೆಂಟಾ ಪ್ರಾಪರ್ಟೀಸ್ ಇನಾಸ್ಟ್ರಕ್ಚರ್ ಪೆ. ಲಿಮಿಟೆಡ್, ಜಾಯಿಂಟ್ ವೆಂಚರ್, 1ನೇ ದರ್ಜೆ ಗುತ್ತಿಗೆದಾರರಿಗೆ ರ್ಟನ್ಕೀ ಆಧಾರದ ಮೇಲೆ ಅನುಮೋದಿತ ಗುತ್ತಿಗೆ ಮೊತ್ತ 446.23 ಕೋಟಿಗಳಿಗೆ ಕರಾರು ನಿರ್ವಹಿಸಲಾಗಿರುತ್ತದೆ. 2022ರ ಮೇ 18ರಂದು ಗುತ್ತಿಗೆದಾರರಿಗೆ ಕಾಮಗಾರಿ ಸ್ಥಳ ಹಸ್ತಾಂತರಿಸಲಾಗಿತ್ತು.
11 ಮೆ.ವಾ. ವಿದ್ಯುತ್ ಸಂಪರ್ಕ: ಜಿಲ್ಲೆಯ 222 ಕೆರೆಗಳು ಹಾಗೂ ಚಿಂತಾಮಣಿ ತಾಲೂಕಿನ 50 ಕೆರೆಗಳು ಕೆರೆಗಳಿಗೆ 2ನೇ ಹಂತದ ಯೋಜನೆಯಿಂದ ನೀರು ಹರಿಸುವ ಯೋಜನೆ ಇದಾಗಿದೆ. 9 ಕಡೆಗಳಲ್ಲಿ ಪಂಪ್ಹೌಸ್ ನಿರ್ಮಿಸಿ ಪೈಪ್ಲೈನ್ ಮೂಲಕ ಎತ್ತರದ ರಿಡ್ಜ್ ಪಾಯಿಂಟ್ಗೆ ಪಂಪ್ ಮಾಡಿ ಅಲ್ಲಿಂದ ಗುರುತ್ವಾಕರ್ಷಣದ ಆಧಾರದ ಮೇರೆಗೆ ನೀರು ಹರಿಸಲಾಗುವುದು. ಇದಕ್ಕೆ ಸುಮಾರು 11 ಮೆಗಾವಾಟ್ ವಿದ್ಯುತ್ ಸಂಪರ್ಕ ಅವಶ್ಯಕತೆಯಿದೆ. ವಿದ್ಯುತ್ ಅಳವಡಿಕೆ ಮತ್ತು ಪಂಪ್ ಮೋಟಾರ್ ಅಳವಡಿಸಿದ ಬಳಿಕ 272 ಕೆರೆಗಳಿಗೆ ನೀರು ಹರಿಯಲಿದೆ. ಅವಿಭಜಿತ ಕೋಲಾರ ಜಿಲ್ಲೆಯ ಕೆರೆಗಳ ಅಂತರ್ಜಲ ಈ ಯೋಜನೆ ಅನುಕೂಲವಾಗಲಿದೆ. ಕೋಲಾರ ತಾಲೂಕಿನ 45, ಶ್ರೀನಿವಾಸಪುರ 73, ಮಾಲೂರು 33, ಬಂಗಾರಪೇಟೆ 17, ಮುಳಬಾಗಿಲು 42, ಕೆಜಿಎಫ್ 12, ಚಿಂತಾಮಣಿ 52 ಒಟ್ಟು ಸೇರಿ 272 ಕೆರೆಗಳಿಗೆ 2ನೇ ಹಂತದ ಯೋಜನೆಗೆ ಒಳಪಟ್ಟಿವೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಕಾಮಗಾರಿ ಆರಂಭವಾಗಿದ್ದು ಡಿಸೆಂಬರ್ ಅಂತ್ಯದವರೆಗೆ ಮಳೆಯಿದ್ದ ಕಾರಣ ಕಾಮಗಾರಿ ವಿಳಂಬವಾಯಿತು. ಆದಷ್ಟು ಬೇಗ ಪಂಪ್ಹೌಸ್ ಮತ್ತು ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಲಾಗುವುದು. ವಿದ್ಯುತ್ ಸಂಪರ್ಕದ ಬಳಿಕ ಕೆರೆಗಳಿಗೆ ನೀರು ಹರಿಸಲಾಗುವುದು. ಶ್ರೀನಿವಾಸಪುರ ಪಟ್ಟಣದಲ್ಲಿ ಪೈಪ್ಲೈನ್ ಅಳವಡಿಕೆ ಕಾಮಗಾರಿ ವಿಳಂಬವಾಗುತ್ತಿದೆ. ಉಳಿದಂತೆ ಎಲ್ಲ ತಾಲೂಕುಗಳಲ್ಲಿ ಅಳವಡಿಸಲಾಗುತ್ತಿರುವ ಪೈಪ್ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದೆ. ರವಿಸೂರನ್
ಸಣ್ಣ ನೀರಾವರಿ ಕಾರ್ಯಪಾಲಕ ಅಭಿಯಂತ