More

    ವೀರಶೈವ ಮಹಾಸಭಾದಿಂದ ಸನ್ಮಾನ,ಪ್ರತಿಭಾ ಪುರಸ್ಕಾರ

    ಚಿತ್ರದುರ್ಗ: ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕ, ಅ.28ರಂದು ಬೆಳಗ್ಗೆ 11ಕ್ಕೆ ನಗರದ ಶ್ರೀ ಜಗದ್ಗುರು ಪಂಚಾ ಚಾರ್ಯ ಕಲ್ಯಾಣ ಮಂಟಪದಲ್ಲಿದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಏರ್ಪಡಿಸಿದೆ. ಅಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾದ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

    ಅರಣ್ಯಸಚಿವ ಈಶ್ವರ ಖಂಡ್ರೆ, ಮಹಾಸಭಾ ಹಾಗೂ ಸಮಾಜದ ನಾನಾ ಪ್ರಮುಖರು ಭಾಗವಹಿಸಲಿರುವ ಈ ಸಮಾರಂಭದಲ್ಲಿ ಶಾ ಸಕ ಕೆ.ಸಿ.ವೀರೇಂದ್ರಪಪ್ಪಿ,ಎಂಎಲ್‌ಸಿ ಕೆ.ಎಸ್.ನವೀನ್,ವೀರಶೈವ-ಲಿಂಗಾಯತ ಒಳಪಂಗಡ ಸಂಘ ಟನೆಗಳ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸ ಲಾಗುತ್ತದೆ.
    ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತಿರ್ಣರಾಗಿರುವ 300ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ 2 ಸಾವಿರ ರೂ.ಗಳೊಂದಿಗೆ ಗೌರವಿಸಲಾಗುತ್ತದೆ.

    ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಮಹಾಸಭಾದ ನಗರ ಘಟಕದಿಂದ ಸಮಾರಂಭದ ಸ್ಥಳದಲ್ಲಿ ಏರ್ಪಡಿಸಿರುವ ಆರೋ ಗ್ಯ ಉಚಿತ ತಪಾಸಣೆ ಶಿಬಿರವನ್ನು ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ್ ಉದ್ಘಾಟಿಸಲಿದ್ದಾರೆ. ಮಹಾಸಭಾ ಬೆಂಗಳೂರು ಗ್ರಾ ಮಾಂತರ ಘಟಕದ ಅಧ್ಯಕ್ಷ ಸಿ.ವಿರೂಪಾಕ್ಷಯ್ಯ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಮಹಾಸಭಾ ಜಿಲ್ಲಾಪ್ರಧಾನ ಕಾರ‌್ಯದರ್ಶಿ ಜಿ.ಎನ್.ಮಹೇಶ್ ತಿಳಿಸಿದ್ದಾರೆ.


    (ಮಗ್‌ಶಾಟ್ ಶಾಮನೂರು ಶಿವಶಂಕರಪ್ಪ)


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts