ಹುಬ್ಬಳ್ಳಿ: ವಂದನೆ, ಅಭಿನಂದನೆ..ಹೃದಯ ತುಂಬಿದ ಅಭಿನಂದನೆ…
ಕರೊನಾ ಸೇನಾನಿಗಳಿಗೆ ಅಭಿನಂದನೆ ಸಲ್ಲಿಸಲು ಹುಬ್ಬಳ್ಳಿಯ ಕಲಾವಿದರು, ಸಾಹಿತಿಗಳು ಈ ಗೀತೆಯೊಂದನ್ನು ಹಾಡಿ ಯೂಟ್ಯೂಬ್ನಲ್ಲಿ ಹರಿಬಿಟ್ಟಿದ್ದು, ಬಹಳ ಸದ್ದು ಮಾಡುತ್ತಿದೆ. ವೈದ್ಯಕೀಯ, ರೈಲ್ವೆ, ಮಹಾನಗರ ಪಾಲಿಕೆ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು ಕರೊನಾ ಸೋಂಕಿನ ಭೀತಿ ಮಧ್ಯೆ ಅವಿರತವಾಗಿ ದುಡಿಯುತ್ತಿರುವುದನ್ನು ಹಾಡಿನ ಮೂಲಕ ಅಭಿನಂದಿಸಲಾಗಿದೆ.
ಕಲಾವಿದರಾದ ಸುಭಾಷ ನರೇಂದ್ರ, ಯಶವಂತ ಸರದೇಶಪಾಂಡೆ, ಪಂ. ಶ್ರೀನಿವಾಸ ಜೋಶಿ, ಪಂ. ಜಯತೀರ್ಥ ಮೇವುಂಡಿ, ಡಾ. ಲಿಂಗರಾಜ ಅಂಗಡಿ, ಡಾ. ಗೋವಿಂದ ಮಣ್ಣೂರು, ಗದಿಗೆಯ್ಯ ಹಿರೇಮಠ, ವಿನಯ ಯು.ಜೆ. ಹಾಡಿನಲ್ಲಿ ತಮ್ಮ ಧ್ವನಿ ಗೂಡಿಸಿದ್ದಾರೆ. ನವೀನ ಶೆಟ್ಟರ್ ಸಾಹಿತ್ಯ, ಪರಿಕಲ್ಪನೆ ಮತ್ತು ನಿರ್ದೇಶನ ಮಾಡಿದ್ದಾರೆ.