More

    ರಾಸಾಯನಿಕ ಬಳಕೆ ಅಪಾಯಕಾರಿ

    ಬೆಳಗಾವಿ: ಪಶು ಇಲಾಖೆಯ ಕೇಂದ್ರೀಯ ಗ್ರಾಮೀಣ ಜೀವನೋಪಾಯ ಅಧ್ಯಯನ ಯೋಜನೆಯಡಿ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳು ಸಮೀಪದ ಕಣಬರ್ಗಿಯ ಗಡ್ಡೆ ಕುರಿ-ಮೇಕೆ ಸಾಕಣೆ ಕೇಂದ್ರ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

    ಎರೆಹುಳು ಗೊಬ್ಬರ ತಯಾರಿಕೆ ಕೇಂದ್ರದ ಮುಖ್ಯಸ್ಥ ನಾಗೇಶ ಗಡ್ಡೆ ಮಾತನಾಡಿ, ಹೆಚ್ಚು ಇಳುವರಿ ಪಡೆಯುವ ಧಾವಂತದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಭೂಮಿಯನ್ನು ರೋಗಗ್ರಸ್ಥ ಮಾಡಲಾಗುತ್ತಿದೆ. ಇಂಥ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡಲು ಸಾಧ್ಯ ಇಲ್ಲ ಎಂದರು.

    ಎರೆಹುಳುವನ್ನು ರೈತನ ಮಿತ್ರ, ಪ್ರಕೃತಿಯ ನೇಗಿಲು ಎಂದು ಕರೆಯಲಾಗುತ್ತದೆ. ಎರೆಹುಳುಗಳು ರೈತನಂತೆ ಹಗಲುರಾತ್ರಿ ಎನ್ನದೆ ನಿರಂತರವಾಗಿ ಭೂಮಿಯಲ್ಲಿ ದುಡಿಯುತ್ತಿರುತ್ತವೆ. ಕೆಳಭಾಗದ ಭೂಮಿಯ ಮಣ್ಣು ಮೇಲಕ್ಕೆ ತಂದು ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಹಕರಿಸುತ್ತದೆ ಎಂದರು.

    ಪಶು ಇಲಾಖೆಯಿಂದ ಆರು ದಿನಗಳ ಕಾಲ ತರಬೇತಿ ನಡೆದಿದ್ದು, ಒಟ್ಟು 30 ಮಹಿಳೆಯರನ್ನು ಪ್ರತಿ ಗ್ರಾಪಂನ ಮಹಿಳಾ ಸಂಘದಿಂದ ತಲಾ ಒಬ್ಬರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕಣಬರ್ಗಿಯ ಗಡ್ಡೆ ಕುರಿ ಮತ್ತು ಮೇಕೆ ಸಾಕಣೆಕೇಂದ್ರ, ಗಡ್ಡೆ ಎರೆಹುಳು ಗೊಬ್ಬರ, ವರ್ಮಿ ವಾಶ್ ಕೇಂದ್ರಕ್ಕೆ ಭೇಟಿ ನೀಡಿದ ಪ್ರಶಿಕ್ಷಣಾರ್ಥಿಗಳು ಎರೆಹುಳು ಗೊಬ್ಬರ ತಯಾರಿಕೆ, ಬಳಕೆ, ಇದರ ಲಾಭ, ಕೀಟನಾಶಕಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ಪಡೆದರು. ಪಶು ಇಲಾಖೆ ಅಧಿಕಾರಿ ದುರ್ಗನ್ನವರ, ಮಹ್ಮದ್ ಅಲಿ ಹಾಗೂ ಆನಂದ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts