More

    ರಸ್ತೆಗೆ ಬಿದ್ದಿದ್ದ ಮರ ತೆರವು

    ಎನ್.ಆರ್.ಪುರ: ತಾಲೂಕಿನ ಗುಬ್ಬಿಗಾ, ಅರಕಲಿ ರಸ್ತೆಯ ಮೇಲೆ ಭಾನುವಾರ ಗಾಳಿ-ಮಳೆಯಿಂದ ಭಾರಿ ಗಾತ್ರದ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಧರ್ಮಸ್ಥಳ ಯೋಜನೆ ಬಿ.ಎಚ್.ಕೈಮರ ವಲಯ ಶೌರ್ಯ ವಿಪತ್ತು ತಂಡದವರು ಸೋಮವಾರ ಮರ ತೆರವುಗೊಳಿಸಿದರು. ಮರ ಬಿದ್ದಾಗ ವಿದ್ಯುತ್ ಕಂಬ ಮುರಿದು, ತಂತಿ ತುಂಡಾಗಿತ್ತು. ಮಾಹಿತಿ ತಿಳಿದ ತಂಡದ ಸದಸ್ಯರಾದ ಸಾಜು, ಎಲ್ದೋ, ಪ್ರಭಾಕರ, ಶೈನಿ, ಶಿಬಿ, ಚಂದ್ರ, ಎಲಿಯಾಸ್, ಅರಣ್ಯ ಇಲಾಖೆಯ ಸತೀಶ್ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts