ಚಿತ್ರದುರ್ಗ:ಹಿರಿಯೂರು ಕೆಎಸ್ಆರ್ಟಿಸಿ ಬಸ್ನಿಲ್ದಾಣದಲ್ಲಿ ದುಷ್ಕರ್ಮಿಗಳಿಬ್ಬರು ಯುವಕನೊಬ್ಬನ ಮೇಲೆ ದಾಳಿ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬಸ್ಸಿಳಿದು ನಿಲ್ದಾಣದ ಶೌಚಗೃಹಕ್ಕೆ ತೆರಳುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಏಕಾಏಕಿ ಆಸಿಡ್ ಎರಚಿದ್ದು,ಗಾಯಾಳುವನ್ನು ಹೊ ಳಲ್ಕೆರೆಯ ಅರುಣ್(29)ಎಂದು ಗುರುತಿಸಲಾಗಿದೆ. ತಲೆ,ಮುಖ,ಕೈಗೆ ಗಾಯಾಗಳಾಗಿ ಅಸ್ವಸ್ಥಗೊಂಡಿರುವ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.