ನವಲಗುಂದ: ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮೃಗಶಿರ ಮಳೆಗೆ ಬೆಣ್ಣಿಹಳ್ಳ ಶನಿವಾರ ತುಂಬಿ ಹರಿಯತ್ತಿದೆ. ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಪ್ರವಾಹ ಭೀತಿ ಉಂಟು ಮಾಡುವ ಹಳ್ಳಗಳಾಗಿವೆ. ಹೀಗಾಗಿ, ಈ ಹಳ್ಳಗಳಿಗೆ ಹೊಂದಿಕೊಂಡಿರುವ ಜಮೀನುಗಳ ರೈತರು ಆತಂಕಗೊಂಡಿದ್ದಾರೆ. ಆದರೆ, ಇನ್ನುಳಿದ ರೈತರು ಹೆಸರು, ಹತ್ತಿ, ಉಳ್ಳಾಗಡ್ಡಿ, ಗೋವಿನಜೋಳ, ಶೇಂಗಾ, ತೊಗರಿ, ಮೆಣಸಿನಕಾಯಿ ಮತ್ತಿತರರ ತೋಟಗಾರಿಕೆ ಬೆಳೆಗಳ ಬೀಜ ಬಿತ್ತನೆಗೆ ಸಜ್ಜಾಗಿದ್ದಾರೆ.