More

    ಮಹಿಳೆಯರ ಸಾಧನೆಗೆ ಪುರುಷರ ಸಹಕಾರ ಮುಖ್ಯ

    ಬಸವನಬಾಗೇವಾಡಿ: ಮಹಿಳೆಯರ ಸಾಧನೆಗೆ ಪುರುಷರ ಸಹಕಾರ ಮುಖ್ಯವಾಗಿದೆ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.

    ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಶರಣೆ ಮುಕ್ತಾಯಕ್ಕಾ ಗೆಳತಿಯರ ಬಳಗ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮುಕ್ತಾಯಕ್ಕಾ ಪ್ರಶಸಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಮಹಿಳೆಯರು ಮೂಢನಂಬಿಕೆ ಹಾಗೂ ಮಾನಸಿಕ ಒತ್ತಡದಿಂದ ಹೊರಬರಬೇಕಿದೆ. ಶಾಸಕ ಶಿವಾನಂದ ಪಾಟೀಲ ಅವರ ಧರ್ಮಪತ್ನಿ ಭಾಗ್ಯಶ್ರೀ ಪಾಟೀಲ ಮಾತನಾಡಿ, ಮನೆ-ಮನಗಳಲ್ಲಿ ಗಂಡು-ಹೆಣ್ಣು ಎಂಬ ಭೇದಭಾವಗಳನ್ನು ಬೇರು ಸಮೇತವಾಗಿ ಕಿತ್ತೆಸೆದು ಸಮಾನತೆ ದೃಷ್ಟಿಕೋನದಲ್ಲಿ ಇಬ್ಬರಿಗೂ ಅವಕಾಶಗಳನ್ನು ಕಲ್ಪಿಸುತ್ತ ಪ್ರೋತ್ಸಾಹಿಸುವ ಮನೋಭಾವ ಪ್ರತಿ ಮನೆಗಳಲ್ಲಿ ಬೆಳೆಯಬೇಕು ಎಂದರು.

    ಮುಕ್ತಾಯಕ್ಕಾ ಪ್ರಶಸ್ತಿ ಸ್ವೀಕರಿಸಿದ ರೈತ ಮಹಿಳೆ ಮಂಜುಳಾ ಪೂಜಾರಿ, ಡಾ. ಸುಮಾ ಕಲ್ಲೂರ, ಡಾ. ಶ್ವೇತಾ ಶರಣ, ಮುಕ್ತಾಯಕ್ಕಾ ಗೆಳತಿಯರ ಬಳಗದ ಸದಸ್ಯೆ ಜಯಶ್ರೀ ತೆಗ್ಗಿನಮಠ ಮಾತನಾಡಿದರು. ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನ್ಯಾಯವಾದಿ ಜಯಾ ಸಾಲಿಮಠ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ, ಉಪಾಧ್ಯಕ್ಷೆ ಲಕ್ಷಿಂಬಾಯಿ ಬೆಲ್ಲದ ಉಪಸ್ಥಿತರಿದ್ದರು.

    ಪ್ರತಿಭಾ ರೆಡ್ಡಿ ಪ್ರಾರ್ಥಿಸಿದರು. ಲಕ್ಷ್ಮೀ ಜಾಲಗೇರಿ ಸ್ವಾಗತಿಸಿದರು. ಸರ್ವಮಂಗಲಾ ಕಡಿವಾಲ ನಿರೂಪಿಸಿದರು. ಜಯಶ್ರೀ ಪೂಜಾರಿ ವಂದಿಸಿದರು. ನಂತರ ಶ್ರೀದೇವಿ ರೂಢಗಿ ಅವರ ನೇತೃತ್ವದ ತಂಡವು ನಡೆಸಿಕೊಟ್ಟ ಭರತನಾಟ್ಯವು ಸಭಿಕರನ್ನು ಮಂತ್ರಮುಗ್ಧಗೊಳಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts