More

    ಮಹದೇಶ್ವರ ಜ್ಯೋತಿ ರಥಯಾತ್ರೆಗೆ ಸ್ವಾಗತ

    ಮದ್ದೂರು: ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಅ.13 ರಿಂದ 16ರವರೆಗೆ ನಡೆಯುವ ಮಹಾಕುಂಭಮೇಳದ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಿಂದ ಆಗಮಿಸಿದ ಮಹದೇಶ್ವರ ಜ್ಯೋತಿ ರಥಯಾತ್ರೆಯನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಮಹದೇಶ್ವರ ರಥಯಾತ್ರೆಯು ಮದ್ದೂರು ಪಟ್ಟಣದಿಂದ ಹೊರಟು, ತಾಲೂಕಿನ ಆತಗೂರು, ಕೆಸ್ತೂರು, ಬೆಸಗರಹಳ್ಳಿ, ಕೊಪ್ಪ, ಬಿದರಕೋಟೆ ಮಾರ್ಗದಲ್ಲಿ ಸಂಚರಿಸಿ ಸಂಜೆ ಮಂಡ್ಯ ತಾಲೂಕಿನ ಗ್ರಾಮಗಳಿಗೆ ತಲುಪಲಿದೆ ಎಂದು ತಿಳಿಸಿದರು.
    ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪಿ.ಸಿ.ರಘು, ಗ್ರಾಪಂ ಅಧ್ಯಕ್ಷ ನಂದೀಶ್‌ಗೌಡ, ಪುರಸಭಾ ಸದಸ್ಯ ಮ.ನ.ಪ್ರಸನ್ನಕುಮಾರ್, ತಾಪಂ ಮಾಜಿ ಸದಸ್ಯ ಚಿಕ್ಕಮರಿಯಪ್ಪ, ಮುಖಂಡರಾದ ಮಧು, ಕಿಟ್ಟಿ, ಅರವಿಂದ್, ಶಿವಲಿಂಗಯ್ಯ, ಶಿವಮಲ್ಲಪ್ಪ, ಹೊನ್ನಲಗೆರೆ ಸ್ವಾಮಿ, ರವಿ, ಮೋಹನ್, ಲಿಂಗರಾಜು, ಮಧುಕುಮಾರ್, ಜಯಶಂಕರ್, ಗುರುಸ್ವಾಮಿ, ಶಿವಕುಮಾರ್‌ಆರಾಧ್ಯ, ಮಹೇಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts