More

    ಮಳೆಗೆ ನೆನೆದು ಕುಸಿದ ಮನೆಯ ಗೋಡೆ; ನವವಿವಾಹಿತ ಸೇರಿ 13 ಜನರಿಗೆ ಗಾಯ

    ಹೊಳೆಹೊನ್ನೂರು: ಮಳೆಗೆ ನೆನೆದು ಮನೆಯ ಗೋಡೆ ಕುಸಿದು ನವವಿವಾಹಿತ ಸೇರಿ 13 ಜನ ಗಾಯಗೊಂಡ ಘಟನೆ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.
    ಮದುವೆಯಾಗಿ ನಾಲ್ಕೈದು ದಿನ ಕಳೆದಿದ್ದು, ಮದುವೆಗೆ ಬಂದಿದ್ದ ನೆಂಟರಿಷ್ಠರು ಊಟ ಮಾಡಿ ಮಲಗಿದ್ದರು. ತಡರಾತ್ರಿ ಗೋಡೆ ಕುಸಿದು 13 ಜನ ಗಾಯಗೊಂಡಿದ್ದು, ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
    ಅರಹತೊಳಲಿನ ಗಣೇಶ್ ಅವರ ವಿವಾಹ ಹರಿಹರ ತಾಲೂಕು ಹನಗವಾಡಿಯ ಸವಿತಾಳೊಂದಿಗೆ ಹರಿಹರದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ನೆರವೇರಿತ್ತು. ಮದುವೆ ನಂತರ ಅರಹತೊಳಲಿಗೆ ಆಗಮಿಸಿದ್ದರು. ಸೋಮವಾರ ತಡರಾತ್ರಿ ಮನೆಯ ಗೋಡೆ ಕುಸಿದು ಕಾರಣ ಛಾವಣಿ ಕಳಚಿ ಬಿದ್ದಿದೆ. ನಡು ಮನೆಯಲ್ಲಿ ಮಲಗಿದ 13 ಜನರ ಮೇಲೆ ಗೋಡೆ ಹಾಗೂ ಛಾವಣಿಯ ಅವಶೇಷಗಳು ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಮಧು ಮಗ ಗಣೇಶ್ ಹಾಗೂ ಆತನ ಅಕ್ಕನ ಮಗನಿಗೆ ಸ್ವಲ್ಪ ಪೆಟ್ಟು ಬಿದ್ದಿದೆ. ಸದ್ದು ಕೇಳಿ ಅಕ್ಕಪಕ್ಕದ ಮನೆಯವರು ನೆರವಿಗೆ ಧಾವಿಸಿದ್ದು, ಅವಶೇಷಗಳಡಿ ಸಿಲುಕಿದವರನ್ನು ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts