More

    ಮರಕ್ಕೆ ಬಸ್ ಡಿಕ್ಕಿ, ಮೂವರಿಗೆ ಗಾಯ

    ದೊಡವಾಡ: ಬೈಲಹೊಂಗಲದಿಂದ ದೊಡವಾಡ-ನನಗುಂಡಿಕೊಪ್ಪ ಗ್ರಾಮಗಳಿಗೆ ತೆರಳುತ್ತಿದ್ದ ಬೈಲಹೊಂಗಲ ಸಾರಿಗೆ ಘಟಕದ ಬಸ್ ಗುರುವಾರ ಬೆಳಗ್ಗೆ ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ, ದೊಡವಾಡ ಗ್ರಾಮದ ತರಗಾರ ಗಚ್ಚಿನ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

    ದೊಡವಾಡ ಗ್ರಾಮದ ವೆಂಕಪ್ಪ ಯರಿಕಿತ್ತೂರ, ಮಲ್ಲಪ್ಪ ಯರಿಕಿತ್ತೂರ ಹಾಗೂ ಮಂಜುನಾಥ ಯರಿಕಿತ್ತೂರ ಗಾಯಗೊಂಡಿದ್ದು, ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಸ್ಸಿನಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಹಾಗೂ ಕೇವಲ ಮೂವರು ಪ್ರಯಾಣಿಕರು ಮಾತ್ರ ಸಂಚರಿಸುತ್ತಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

    ಬ್ರೇಕ್ ೇಲ್ ಆಗಿದ್ದ ಬಸ್: ಬೈಲಹೊಂಗಲ ಸಾರಿಗೆ ಘಟಕದ ದುರಸ್ತಿ ವಿಭಾಗದ ಮೆಕಾನಿಕ್ ಹಾಗೂ ಚಾರ್ಜ್‌ಮನ್‌ಗೆ ಗುರುವಾರ ಬೆಳಗ್ಗೆಯೇ ಘಟಕದಿಂದ ಬಸ್ ತರುವಾಗಲೇ ಬ್ರೇಕ್ ವಿಫಲತೆ ಸರಿ ಮಾಡಿಕೊಡುವಂತೆ ತಿಳಿಸಿದ್ದೆ. ಆದರೆ, ಅವರು ಒಂದು ಟ್ರಿಪ್ ಹೋಗಿ ಬನ್ನಿ. ನಂತರ ಸರಿ ಮಾಡುತ್ತೇವೆ ಎಂದು ಬೇಜವಾಬ್ದಾರಿಯಿಂದ ಹೇಳಿದರು. ನಾನು ಅನಿವಾರ್ಯವಾಗಿ ಅದೇ ಬಸ್ ತೆಗೆದುಕೊಂಡು ಹೋಗಿದ್ದೆ.

    ಪ್ರಯಾಣಿಕರೊಂದಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆಯೇ ದಿಢೀರ್ ಬ್ರೇಕ್ ಫೇಲ್ ಆಗಿದ್ದರಿಂದ ನಿಯಂತ್ರಣ ತಪ್ಪಿತು. ಎದುರಿಗೆ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಕ್ಕದ ಹೊಲದಲ್ಲಿದ್ದ ಮರಕ್ಕೆ ಬಸ್ ಡಿಕ್ಕಿ ಹೊಡೆಸಬೇಕಾಯಿತು ಎಂದು ಬಸ್‌ನ ಚಾಲಕ ಮಡಿವಾಳಯ್ಯ ಹಿರೇಮಠ ಬೈಲಹೊಂಗಲ ಸಾರಿಗೆ ಘಟಕದ ದುರಸ್ತಿ ವಿಭಾಗದವರ ವಿರುದ್ಧ ಆರೋಪ ಮಾಡಿದ್ದಾರೆ. ದೊಡವಾಡ ಠಾಣೆ ಪಿಎಸ್‌ಐ ಗಜಾನನ ನಾಯಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts