More

    ಮೋದಿ ಸರ್ಕಾರ ಉದ್ಯಮಿಗಳ ಪರವಾಗಿದೆ

    ಗುಳೇದಗುಡ್ಡ: ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರು ಹತ್ತು ವರ್ಷ ಬರಿ ಸುಳ್ಳು ಹೇಳುತ್ತ ಬಂದಿದ್ದಾರೆ. ರೈತರ ಸಾಲ ಮನ್ನಾ ಮಾಡದ ಕೇಂದ್ರ ದೊಡ್ಡದೊಡ್ಡ ಉದ್ದಿಮೆದಾರರ ಸಾಲಮನ್ನಾ ಮಾಡಿದ್ದಾರೆ. ಇದು ಉದ್ಯಮಿಗಳ ಪರವಾಗಿರುವ ಸರ್ಕಾರ ಎಂದು ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದರು.

    ಸಮೀಪದ ಹಲ್ಲಿಕೇರಿ ಗ್ರಾಮದಲ್ಲಿ ಬುಧವಾರ ರಾತ್ರಿ ಮತಯಾಚಿಸಿ ಅವರು ಮಾತನಾಡಿ, ಈ ಬಾರಿ ನನಗೊಂದು ಅವಕಾಶ ಮಾಡಿಕೊಟ್ಟರೆ ಬಾಗಲಕೋಟೆ ಕ್ಷೇತ್ರ 20 ವರ್ಷಗಳಲ್ಲಿ ಆಗದಿರುವ ಅಭಿವೃದ್ಧಿಯನ್ನು ಐದು ವರ್ಷದಲ್ಲಿ ಮಾಡಿ ತೋರಿಸುವೆ. ನಾನು ಬಾಗಲಕೋಟೆಯ ಧ್ವನಿಯಾಗಿ ನಿಮ್ಮೆಲ್ಲರ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

    ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ರಾಜ್ಯದ ಪ್ರತಿಯೊಬ್ಬರ ಮನೆಗಳಿಗೆ, ಪ್ರತಿ ಮಹಿಳೆಗೆ ಸಿಎಂ ಸಿದ್ದರಾಮಯ್ಯನವರ ಒಂದಲ್ಲ ಒಂದು ಯೋಜನೆಗಳು ದೊರಕಿವೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸಿದ್ದರಾಮಯ್ಯ ಅವರ ಜನೋಪಯೋಗಿ ಯೋಜನೆಗಳ ಲಾಭ ದೊರಕಿವೆ. ಈ ಬಾರಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರಿಗೆ ಬೆಂಬಲ ನೀಡಬೇಕು ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ರಾಜು ಜವಳಿ, ರಮೇಶ ಬೂದಿಹಾಳ, ವೈ.ಆರ್. ಹೆಬ್ಬಳ್ಳಿ, ಜಮೀರ್ ಮೌಲ್ವಿ, ಚಿದಾನಂದಸಾ ಕಾಟವಾ, ಡಿ.ಡಿ. ಗೌಡರ, ಗೋಪಾಲ ಜಾಧವ, ಮುದಕಪ್ಪ ಹೂನೂರ, ವೈ.ಬಿ. ಗೌಡರ, ಪಾಂಡುರಂಗ ಚವ್ಹಾಣ್, ಹನುಮಂತ ಪತ್ತಾರ, ಲೆಂಕಪ್ಪ ಹಿರೇಕುರಬರ, ಸಿದ್ದಪ್ಪ ವಗ್ನಾರ, ಅಲ್ಲಿಸಾಬ ವಾಲೀಕಾರ, ಲಚಮಪ್ಪ ರಾಠೋಡ, ಶಂಕರಗೌಡ ಗೌಡ್ರ, ಮೋತಿಲಾಲ ರಾಠೋಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts