More

    ಭೀಮಾತೀರದ ಗುಂಡಿನ ದಾಳಿ ಪ್ರಕರಣ: ಮತ್ತಿಬ್ಬರ ಬಂಧನ

    ವಿಜಯಪುರ: ಭೀಮಾತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಹಾಗೂ ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಜಾಲಗೇರಿ ನಿವಾಸಿ ಸಚಿನ ಚವಾಣ (26) ಹಾಗೂ ಚಡಚಣ ನಿವಾಸಿ ಮಲ್ಲಿಕಾರ್ಜುನ ಶಿವಾನಂದ ಪಾಟೀಲ (26) ಬಂಧಿತ ಆರೋಪಿಗಳು.

    ಇವರಿಂದ ಒಂದು ಪಿಸ್ತೂಲ್, ಒಂದು ಜೀವಂತ ಗುಂಡು, ಎರಡು ಮೊಬೈಲ್, ತಲವಾರ ವಶಕ್ಕೆ ಪಡೆಯಲಾಗಿದೆ.

    ನ. 2 ರಂದು ಮಧ್ಯಾಹ್ನ 3.30ರ ಸುಮಾರಿಗೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಲಾಗಿದ್ದು ತನಿಖೆ ಚುರುಕೊಂಡಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಎಎಸ್‌ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಸಿಪಿಐ ಎಂ.ಕೆ. ಧ್ಯಾಮಣ್ಣವರ, ರವೀಂದ್ರ ನಾಯ್ಕೋಡಿ, ಸಿ.ಬಿ. ಬಾಗೇವಾಡಿ, ಸುರೇಶ ಬಂಡೆಗುಂಬಳ, ಸುನೀಲ ಆರ್. ಕಾಂಬಳೆ, ಬಸವರಾಜ ಮೂಕರ್ತಿಹಾಳ, ಸೋಮಶೇಖರ ಜುಟ್ಟಲ ಕಾರ್ಯ ಶ್ಲಾಘನೀಯ. ಈವರೆಗೆ ಒಟ್ಟು 24 ಜನರನ್ನು ದಸ್ತಗಿರಿ ಮಾಡಲಾಗಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts