ಸಾಗರ: ಸಂಪೂರ್ಣ ಗುಂಡಿ ಬಿದ್ದಿರುವ ತಾಲೂಕಿನ ಬಿದರೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ರಸ್ತೆಯಲ್ಲೇ ಬಾಳೆಗಿಡ ನೆಟ್ಟು ಮಂಗಳವಾರ ಪ್ರತಿಭಟನೆ ನಡೆಸಿದರು.
ತಲಕಳಲೆ ಡ್ಯಾಂ ನಿರ್ಮಾಣ ಸಂದರ್ಭ ಪವರ್ ಚಾನಲ್ ನಿರ್ವಣಕ್ಕೆಂದು ನಮ್ಮ ಭೂಮಿ ಕಳೆದುಕೊಂಡಿದ್ದೇವೆ. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನೂ ಕಳೆದುಕೊಂಡ ನಮಗೆ ಸರ್ಕಾರ ಕನಿಷ್ಠ ಸೌಲಭ್ಯ ನೀಡದೆ ಸತಾಯಿಸುತ್ತಿದೆ. ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿಗಾಗಿ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ವಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹುಕ್ಲು, ಇಂದ್ರೋಡಿಮನೆ, ಜಿಡ್ಡಿನಮನೆ, ಕುಡುಗುಂಜಿ, ಐತೂಮನೆ, ಮೇಲೂರ್ವುನೆ, ಅತ್ತಿಗೋಡು, ಹಗರೆ, ವಟ್ಟಕ್ಕಿ ಮತ್ತಿತರ ಗ್ರಾಮಗಳನ್ನು ಸಂರ್ಪಸುವ ಮುಖ್ಯ ರಸ್ತೆ ಇದಾಗಿದೆ. ಶಾಲಾ ಮಕ್ಕಳು, ಗ್ರಾಮಸ್ಥರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಮಳೆಗಾಲದಲ್ಲಿ ಕೆಸರಾದರೆ, ಬೇಸಿಗೆಯಲ್ಲಿ ಧೂಳುಮಯವಾಗಿರುತ್ತದೆ ಎಂದು ದೂರಿದರು.
ಪವರ್ ಚಾನಲ್ ನಿರ್ಮಾಣ ಕಾಲದಲ್ಲಿ ರಸ್ತೆಯನ್ನು ಕೆಪಿಸಿ ನಿರ್ವಹಿಸುತ್ತಿತ್ತು. ನಂತರ ಜಿಪಂ ಜವಾಬ್ದಾರಿ ತೆಗೆದುಕೊಂಡಿತ್ತು. ಈಗ ರಸ್ತೆ ಗುಂಡಿ ಬಿದ್ದಿದ್ದು, ಯಾವ ಇಲಾಖೆಯೂ ಗಮನಿಸುತ್ತಿಲ್ಲ. ಕೂಡಲೇ ರಸ್ತೆ ದುರಸ್ತಿಪಡಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಗ್ರಾಮಸ್ಥರಾದ ರವಿಕುಮಾರ್, ಶಾಂತರಾಜು, ಸಂತೋಷ್ಕುಮಾರ್, ರಾಜು, ಬಾಹುಬಲಿ, ಜಿನೇಂದ್ರಕುಮಾರ್, ಬಿ.ಸಿ.ಮೋಹನ್ ಇದ್ದರು.