More

    ಬಿಜೆಪಿಯಲ್ಲಿ ಬಣ ರಾಜಕೀಯ ಜೋರು

    ಯಲ್ಲಾಪುರ: ತಾಲೂಕು ಮಾರ್ಕೆಟಿಂಗ್ ಸೊಸೈಟಿಗೆ ಅ. 14ರಂದು ನಡೆಯಲಿರುವ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, 12 ಸ್ಥಾನಗಳಿಗೆ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಬೆಂಬಲಿಗರ ನಡುವೆಯೇ ಪೈಪೋಟಿ ಏರ್ಪಟ್ಟಿರುವುದು ಕುತೂಹಲ ಮೂಡಿಸಿದೆ.

    ಕೆಡಿಸಿಸಿ ಬ್ಯಾಂಕ್ ಪ್ರತಿನಿಧಿಯನ್ನು ಹೊರತುಪಡಿಸಿ 13 ಸದಸ್ಯರ ಆಯ್ಕೆಯಾಗಬೇಕಾಗಿದ್ದು, ಈಗಾಗಲೇ ಬ ವರ್ಗದ ರಾಜು ಗೌಡ ಕುಂದರಗಿ ಅವಿರೋಧ ಆಯ್ಕೆಗೊಂಡಿದ್ದಾರೆ.

    ಉಳಿದ 12 ಜನ ಚುನಾವಣೆಯ ಮೂಲಕ ಆಯ್ಕೆಯಾಗಬೇಕಿದೆ. ಬಿಜೆಪಿ ಬೆಂಬಲಿತರ ಎರಡು ಗುಂಪು ಹಾಗೂ ಕಾಂಗ್ರೆಸ್​ನ ಇಬ್ಬರು ಚುನಾವಣೆ ಎದುರಿಸಲಿದ್ದಾರೆ. ಬಿಜೆಪಿಯಿಂದಲೇ ಎರಡು ಗುಂಪಾಗಿರುವುದು ಪಕ್ಷಕ್ಕೆ ತಲೆನೋವು ತಂದಿದೆ. ಹಾಲಿ ಅಧ್ಯಕ್ಷರಾಗಿರುವ ಎನ್. ಕೆ. ಭಟ್ಟ ಹಾಗೂ ಹಾಲಿ ನಿರ್ದೇಶಕ ಉಮೇಶ ಭಾಗ್ವತ ಬಣಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ.

    ನಿರ್ದೇಶಕ ಸ್ಥಾನಕ್ಕೆ ಉಮಾಮಹೇಶ್ವರ ಭಾಗ್ವತ, ಎನ್. ಕೆ. ಭಟ್ಟ, ಟಿ. ಎನ್. ಭಟ್ಟ, ನರಸಿಂಹ ಕೋಣೆಮನೆ, ರವಿ ಕೈಟ್ಕರ್, ನಾರಾಯಣ ಭಟ್ಟ ಕೊಡ್ಲಗದ್ದೆ, ಶ್ರೀಪತಿ ಮುದ್ದೆಪಾಲ, ಸುಬ್ಬಣ್ಣ ಬೋಳ್ಮನೆ, ಹೇರಂಬ ಹೆಗಡೆ, ಡಿ. ಎನ್. ಗಾಂವ್ಕಾರ, ರಾಮ ಕರುಮನೆ, ವೆಂಕಟ್ರಮಣ ಭಟ್ಟ ಕಿರಕುಂಭತ್ತಿ, ವೆಂಕಟ್ರಮಣ ಬೆಳ್ಳಿ, ಶ್ರೀಪಾದ ಹೆಗಡೆ, ಪಾರ್ವತಿ ಭಟ್ಟ, ಪಾರ್ವತಿ ಗಾಂವ್ಕಾರ, ಶಾರದಾ ಭಟ್ಟ ಬಾರೆ, ಸೌಮ್ಯಾ ಭಟ್ಟ, ಗೋಪಾಲ ಸಿದ್ದಿ, ಲಾರೆನ್ಸ್ ಸಿದ್ದಿ, ಸಾಲು ಸಿದ್ದಿ, ಗಣಪತಿ ಶೇಟ್, ತಮ್ಮಣ್ಣ ಗೌಡ ಕಣದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts