More

    ಬಿಜೆಪಿಗೆ 150 ಸ್ಥಾನ ನಿಶ್ಚಿತ: ಶಾಸಕ ಕೆ.ಎಸ್.ಈಶ್ವರಪ್ಪ ವಿಶ್ವಾಸ

    ಹೊಸನಗರ: ವಿಜಯ ಸಂಕಲ್ಪ ಯಾತ್ರೆಗೆ ಎಲ್ಲೆಡೆ ಅಭೂತಪೂರ್ವ ಜನ ಬೆಂಬಲ ದೊರೆತಿದ್ದು ಬರಲಿರುವ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲುವು ಸಾ„ಸಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
    ಬಿಜೆಪಿ ವಿಜಯಸಂಕಲ್ಪ ಯಾತ್ರೆ ತಾಲೂಕಿನ ನಿಟ್ಟೂರು ಮೂಲಕ ಬುಧವಾರ ಜಿ¯್ಲÉಗೆ ಪ್ರವೇಶಿಸಿದ ವೇಳೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಶಕ್ತಿಯನ್ನು ಶಿವಮೊಗ್ಗ ಜಿ¯್ಲÉ ಸಂಘಟನೆ ಮೂಲಕವೇ ರಾಜ್ಯಕ್ಕೆ ತನ್ನ ಶಕ್ತಿ ತೋರಿಸಿ ಕೊಟ್ಟಿದೆ. ಇಲ್ಲಿಯ ಕಾರ್ಯಕರ್ತರೇ ಸಂಘಟನಾ ಶಕ್ತಿ ಎಂದರು.
    ವಿಧಾನಸಭಾ ಚುನಾವಣೆಯಲ್ಲಿ ಸಾಗರ, ತೀರ್ಥಹಳ್ಳಿಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಜಿ¯್ಲÁ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜï, ತಾಲೂಕು ಅಧ್ಯಕ್ಷ ಗಣಪತಿ, ಯಾತ್ರೆ ಸಂಚಾಲಕ ಧನಂಜಯ ಮೈಸೂರು, ಸಹ ಸಂಚಾಲಕ ದತ್ತಾತ್ರಿ ಇತರರಿದ್ದರು.

    ಪ್ರಮುಖರ ಗೈರು, ನೀರಸ ಸ್ವಾಗತ: ನಿಟ್ಟೂರಿನ ಮೂಲಕ ಶಿವಮೊಗ್ಗ ಜಿ¯್ಲÉಗೆ ಯಾತ್ರೆ ಪ್ರವೇಶಿಸುವ ಕಾರಣ ಅದ್ದೂರಿ ಸ್ವಾಗತ ನೀಡುವುದಾಗಿ ಜಿ¯್ಲÁಧ್ಯಕ್ಷ ಟಿ.ಡಿ.ಮೇಘರಾಜï ತಿಳಿಸಿದ್ದರು. ಆದರೆ ಯಾತ್ರೆ ಆಗಮಿಸುವಾಗ ಕೇಂದ್ರ ಸಚಿವ ಜೋತಿರಾ„ತ್ಯ ಸಿಂದ್ಯಾ, ಗೃಹ ಸಚಿವ ಆರಗ e್ಞÁನೇಂದ್ರ, ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸುನಿಲï ಕುಮಾರ್, ಶಾಸಕ ಹರತಾಳು ಹಾಲಪ್ಪ ಗೈರಾಗಿದ್ದು ಸ್ವಾಗತ ನೀರಸವಾಗಿತ್ತು. ಕೇವಲ 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಿ ಯಾತ್ರೆ ಮುಂದೆ ಸಾಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts