More

    ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಆಹಾರ ಮೇಳ

    ಕೆ.ಆರ್.ಸಾಗರ: ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಹುಲಿಕರೆ ಗ್ರಾಮದ ಬಿ.ಜಿ.ಎಸ್ ಬಾಲಜಗತ್ ಶಾಲೆಯಲ್ಲಿ ಸೋಮವಾರ ಆಹಾರ ಮೇಳ ಆಯೋಜಿಸಲಾಗಿತ್ತು.

    ಆಹಾರ ಮೇಳ ಉದ್ಘಾಟಿಸಿದ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮಿಜಿ ಮಕ್ಕಳಿಗೆ ಕೇಕ್ ತಿನ್ನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮೇಳವನ್ನು ವೀಕ್ಷಿಸಿದರು.

    ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಆಹಾರ ಮೇಳ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಇದು ಮಕ್ಕಳಲ್ಲಿ ಆಸಕ್ತಿ, ವ್ಯಾಪಾರದ ಕುರಿತು ಜ್ಞಾನ, ಪರಸ್ಪರ ಒಡನಾಟವನ್ನು ಹೆಚ್ಚಿಸುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಪಠ್ಯೇತರ ಚಟುವಟಿಕಗಳತ್ತ ಮಕ್ಕಳ ಮನಸ್ಸು ವಾಲುತ್ತದೆ. ಇದಕ್ಕೆ ಪಾಲಕರ ಪ್ರೋತ್ಸಾಹ ಅತ್ಯಗತ್ಯ ಎಂದರು.

    ಪಾಲಾಕ್ ಗೋಬಿ, ಬಾಳೆಕಂದು ಕೋಸಂಬರಿ, ಚುರಮುರಿ, ಕೀರು ಚಕ್ಕಿ, ಚಪಾತಿ ರೋಲ್, ಸ್ಯಾಂಡ್ ವಿಚ್, ಪಾನ್ ಲಾಡು, ಬೇಸನ್ ಲಾಡು , ರವೆ ಉಂಡೆ, ದಹಿಪುರಿ, ಬಾದಮ್ ಮಿಲ್ಕ್, ಚಿರೋಟಿ, ಅಲೂ ಕಪಾಪ್, ಮದ್ದೂರ್ ವಡೆ, ಕಲ್ಲಂಗಡಿ ಜ್ಯೂಸ್, ಪ್ರೂಟ್ಸ್ ಸಲಾಡ್, ಸೌತೆಕಾಯಿ ಸಲಾಡ್ ಸೇರಿದಂತೆ ಹಲವಿ ತಿನುಸುಗಳನ್ನು ತಯಾರಿಸಿದ್ದರು. ಪಾಲಕರು, ವಿದ್ಯಾರ್ಥಿಗಳು ತಿಂಡಿಗಳನ್ನು ಖರೀದಿಸಿ ಸವಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts