ಹುಬ್ಬಳ್ಳಿ: ಲಾಕ್ಡೌನ್ ಸಡಿಲಗೊಂಡ ಬಳಿಕ ಬಸ್ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ನೂರಾರು ಪ್ರಯಾಣಿಕರು ಬಸ್ಗಾಗಿ ಕಾದು ಕುಳಿತಿದ್ದು ಕಂಡು ಬಂತು. ಪ್ರತಿಯೊಬ್ಬ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಯಿತು. ಗ್ರಾಮೀಣ ಪ್ರದೇಶ ಮತ್ತು ಇತರ ನಗರಗಳಿಗೆ ಬಸ್ ಬೇಡಿಕೆ ಹೆಚ್ಚಾಗಿತ್ತು. ಬಸ್ಗಳ ಸಂಖ್ಯೆ ವಿರಳವಾಗಿದ್ದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾಯಿತು. ಹಳೇ ಬಸ್ ನಿಲ್ದಾಣದಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಬಸ್ ಸೌಲಭ್ಯವಿದೆ. ಹೊಸೂರು ಬಸ್ ನಿಲ್ದಾಣದಿಂದ ಗದಗ, ವಿಜಯಪುರ, ಬೆಂಗಳೂರು, ಹೈದರಾಬಾದ್ ಮಾರ್ಗದ ಬಸ್ಗಳು ಹಾಗೂ ಹೊಸ ಬಸ್ ನಿಲ್ದಾಣದಿಂದ ಶಿರಸಿ, ಮಂಗಳೂರು ಮಾರ್ಗದ ಬಸ್ಗಳು ಹೊರಡುತ್ತವೆ.