More

    ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ..!

    ನರಗುಂದ: ಪತ್ನಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದ ಪ್ರಕರಣವನ್ನು ಘಟನೆ ನಡೆದ 24 ಗಂಟೆಗಳಲ್ಲಿ ಭೇದಿಸುವಲ್ಲಿ ನರಗುಂದ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕೊಲೆಗೀಡಾದವನ ಪತ್ನಿ ಸಕ್ಕವ್ವ ಸಣ್ಣವರ ಹಾಗೂ ಆಕೆಯ ಪ್ರಿಯಕರ ಕುರ್ಲಗೇರಿ ಗ್ರಾಮದ ಸುರೇಶ ಹುಚ್ಚಪ್ಪ ಚೆಲುವಣ್ಣವರ ಎಂಬುವವರನ್ನು ಪೊಲೀಸರು ಭಾನುವಾರ ಬಂಧಿಸಿ ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಘಟಣೆ ವಿವರ: ಪಟ್ಟಣದ ಜನತಾ ಪ್ಲಾಟ್ ನಿವಾಸಿ ಗದಿಗೆಪ್ಪ ಯಲ್ಲಪ್ಪ ಸಣ್ಣವರ (ಭೂತಾಳೆ) ಏ. 16 ರಂದು ತನ್ನ ಪತ್ನಿ ಸಕ್ಕವ್ವಳೊಂದಿಗೆ ತಮ್ಮ ಹೊಲಕ್ಕೆ ಕೆಲಸಕ್ಕೆ ಹೋಗಿದ್ದ. ಕೆಲ ಹೊತ್ತಿನ ನಂತರ ಸಕ್ಕವ್ವ ಮತ್ತು ಆಕೆಯ ಪ್ರಿಯಕರ ಸುರೇಶ ಇಬ್ಬರು ಸೇರಿ ಹೊಲದಲ್ಲಿ ಗದಿಗೆಪ್ಪನ ಕತ್ತು ಹಿಸುಕಿ ಕೊಲೆಗೈದು ನಂತರ ಗೋಣಿ ಚೀಲದಲ್ಲಿ ಶವವನ್ನು ತುಂಬಿ ಗರಸಿನ ಕಣಿವೆಯಲ್ಲಿರುವ ನೀರಿಗೆ ಎಸೆದು ತಲೆ ಮರೆಸಿಕೊಂಡಿದ್ದರು.

    ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ, ಏ. 19ರಂದು ಇವರ ಜಮೀನಿಗೆ ತೆರಳುವ ಮಾರ್ಗ ಮಧ್ಯದ ಗರಸಿನ ಕಣಿವೆಯಲ್ಲಿ ಗೋಣಿ ಚೀಲದಲ್ಲಿ ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಎಸ್ಪಿ ಎನ್. ಯತೀಶ ಅವರೇ ಖುದ್ದು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದರು. ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲರ ನೇತೃತ್ವದಲ್ಲಿ ವಿ.ಜಿ. ಪವಾರ, ಎಸ್.ಆರ್. ರಾಯನಗೌಡ್ರ, ಶರಣಪ್ಪ ನಾಗೇಂದ್ರಗಡ, ಮುತ್ತು ಬಾರಕೇರ, ಉಮೇಶ ಸುಣಗಾರ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿ ಪ್ರಕರಣ ಬೇಧಿಸುವಂತೆ ಸೂಚಿಸಿದ್ದರು. ಎಸ್ಪಿ ಎನ್.ಯತೀಶ ಅವರ ಮಾರ್ಗದರ್ಶನದಂತೆಯೇ ಫೋನ್ ಕರೆ ಬೆನ್ನಟ್ಟಿದ ಪೊಲೀಸರು ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಚಾಣಾಕ್ಷತನ ಮೆರೆದಿದ್ದಾರೆ.

    ಅನಾಥರಾದ ಮಕ್ಕಳು…!

    ಕೊಲೆ ಆರೋಪಿ ಸಕ್ಕವ್ವ ಕಳೆದ ಎರಡ್ಮೂರು ತಿಂಗಳ ಹಿಂದೆ ತನ್ನ ಪತಿ ಗದಿಗೆಪ್ಪನೊಂದಿಗೆ ಜಗಳ ಮಾಡಿಕೊಂಡಿದ್ದಳು. ಆಗ ಜಮೀನು ಕೆಲಸದ ಆಳುಗಳಿಗಾಗಿ ಕುರ್ಲಗೇರಿಯಿಂದ ನರಗುಂದಕ್ಕೆ ಪ್ರತಿನಿತ್ಯ ಟಾಟಾಏಸ್ ವಾಹನ ತೆಗೆದುಕೊಂಡು ಬರುತ್ತಿದ್ದ ಸುರೇಶನೊಂದಿಗೆ ಸಕ್ಕವ್ವನ ಪರಿಚಯವಾಗಿದೆ. ನಂತರ ಪರಿಚಯ ಸ್ನೇಹವಾಗಿ, ಪ್ರೀತಿಯಾಗಿ ಮಾರ್ಪಟ್ಟು ಕೊನೆಯದಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇದರಿಂದ ಸಕ್ಕವ್ವಳ ಇಬ್ಬರು ಪುಟ್ಟ ಮಕ್ಕಳು ತಂದೆ, ತಾಯಿಗಳಿಲ್ಲದೇ ಅನಾಥರಾಗಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts