More

    ಪ್ರತಿಯೊಬ್ಬರೂ ಸದ್ಗುಣವಂತರಾಗಿ ಬಾಳಿ

    ನರಗುಂದ: ಪ್ರತಿಯೊಬ್ಬರೂ ದುರ್ಗಣ ಬಿಟ್ಟು ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪತ್ರಿವನಮಠದ ಗುರುಸಿದ್ಧ್ದೕರ ಶಿವಾಚಾರ್ಯರು ಹೇಳಿದರು.

    ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿರುವ ಕರಿಯಮ್ಮದೇವಿ ದೇವಸ್ಥಾನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮದ ಹಾದಿಯಲ್ಲಿ ನಡೆದು ಭಕ್ತಿಮಾರ್ಗ ಕಂಡುಕೊಳ್ಳಬೇಕಾಗಿದೆ. ನೆಮ್ಮದಿಗೆ ಅಧ್ಯಾತ್ಮ ಮತ್ತು ಧರ್ಮ ಈ ಎರಡು ಕೊಂಡಿಗಳು ಬಹಳ ಮುಖ್ಯವಾದವು ಎಂದರು.

    ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಭೈರನಹಟ್ಟಿ ಶಾಂತಲಿಂಗ ಸ್ವಾಮಿಗಳು, ಪಂಚಗ್ರಹ ಗುಡ್ಡದ ಸಿದ್ಧಲಿಂಗ ಶಿವಾಚಾರ್ಯರು, ಆಶೀರ್ವಚನ ನೀಡಿದರು.

    ಈ ವೇಳೆ ಉಮೇಶಗೌಡ ಪಾಟೀಲ, ಸಂತೋಷ ಶಾಸ್ತ್ರಿಗಳು, ಚರಂತಯ್ಯ ಶಾಸ್ತ್ರಿಗಳು, ಬಿ.ವಿ. ಆನೇಗುಂದಿ, ಶಂಕ್ರಣ್ಣ ಇಂಗಳಳ್ಳಿ, ಉಮೇಶ ಯಳ್ಳೂರ, ಜಿ.ವಿ. ಮಾಳದಕರ, ಕಮಲಾಕರ ಪುತಲೇಕರ, ಬಾಬೂ ಮಾನೆ, ಮೋದಿನಸಾಬ್ ಪರಾಸ, ಜಹಾಂಗೀರ ಪಠಾಣ ಇತರರು ಉಪಸ್ಥಿತರಿದ್ದರು. ವಿಠಲ ಹಡಗಲಿ ನಿರ್ವಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts