More

    ಪುರಾಣ ಮಂಗಲೋತ್ಸವ

    ಬಾಗಲಕೋಟೆ: ಜಿಲ್ಲೆ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ರುದ್ರಸ್ವಾಮಿ ಹೊರಗಿನಮಠದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ನಡೆದಿದ್ದ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಭಾನುವಾರ ನಡೆಯಿತು.

    ಪುರಾಣ ಮಂಗಲೋತ್ಸವದ ಹಿನ್ನಲೆ ಗ್ರಾಮದಲ್ಲಿ 550 ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಎಲ್ಲ ಮಹಿಳೆಯರಿಗೂ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ನಡೆದಿದ್ದ ಪ್ರವಚನ ಮುಕ್ತಾಯ ಸಮಾರಂಭ ಜರುಗಿತು.
    ಕಮತಗಿಯ ಹೊಳೆ ಹುಚ್ಚೇಶ್ವರ ಶ್ರೀಗಳು ಕುಂಭೋತ್ಸವದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಉಡಿ ತುಂಬಿದರು. ಕಂದಗಲ್ಲ ರುದ್ರಸ್ವಾಮಿ ಮಠದ, ಚೆನ್ನಮಲ್ಲ ಮಹಾಸ್ವಾಮಿಗಳು, ಪ್ರವಚನ ನೀಡಿದ ಡಾ.ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಆಂಧ್ರಪ್ರದೇಶ ಪಂಚಮ ಸಿದ್ದೇಶ್ವರ ಸ್ವಾಮಿಗಳು ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts