ವಿಜಯವಾಣಿ ವಿಶೇಷ ರಾಣೆಬೆನ್ನೂರ
ನಗರದ ಹೊರವಲಯದಲ್ಲಿರುವ ಲೇಔಟ್ಗಳನ್ನು ಎಣ್ಣೆ ಹೊಡೆಯುವ ಪಡ್ಡೆ ಹುಡುಗರು ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ. ಖಾಲಿ ಬಿದ್ದಿರುವ ಈ ಲೇಔಟ್ಗಳು ಈಗ ಮದ್ಯದ ಕಿಕ್ಕೇರಿಸುವ ತಾಣಗಳಾಗಿವೆ.
ನಗರದ ಹೊರವಲಯದ ಹಲಗೇರಿ ರಸ್ತೆ, ಎರೇಕುಪ್ಪಿ ರಸ್ತೆ, ಶ್ರೀರಾಮ ನಗರ ಮೊದಲಾದೆಡೆಗಳಲ್ಲಿ ಹೊಸ ಲೇಔಟ್ಗಳನ್ನು ನಿರ್ವಿುಸಲಾಗಿದೆ. ಇಲ್ಲಿ ಮನೆಗಳು ನಿರ್ವಣವಾಗದ ಕಾರಣ ಖಾಲಿ ಬಿದ್ದಿವೆ. ಹೀಗಾಗಿ, ನಿತ್ಯವೂ ಮದ್ಯ ಪ್ರಿಯರು ಇವುಗಳನ್ನೇ ಬಾರ್ಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಲೇಔಟ್ನ ತಿರುವಿನ ಕಟ್ಟೆ ಬಳಿ ಮೇಲೆ ಬೈಕ್, ಕಾರು ನಿಲ್ಲಿಸಿ ಮದ್ಯ ಸೇವಿಸುತ್ತಿದ್ದಾರೆ.
ಬೇಸಿಗೆಯಲ್ಲಿ ಹೌಸ್ಫುಲ್: ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲು ಹೆಚ್ಚುತ್ತಲೇ ಇದೆ. ಬಿಸಿಲಿನ ಝುಳಕ್ಕೆ ಬಾರ್ನಲ್ಲಿ ಕುಳಿತು ಮದ್ಯ ಸೇವಿಸಲು ಹಲವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ. ಕತ್ತಲಾಗುತ್ತಿದ್ದಂತೆ ಮದ್ಯದ ಬಾಟಲ್ಗಳನ್ನು ಪಾರ್ಸಲ್ ತೆಗೆದುಕೊಂಡು ಲೇಔಟ್ಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ನಿತ್ಯವೂ ರಾತ್ರಿ ಲೇಔಟ್ಗಳು ಹೌಸ್ಫುಲ್ ಆಗುತ್ತಿವೆ. ಭಾನುವಾರವಂತೂ ಕುಳಿತುಕೊಳ್ಳಲು ಜಾಗ ಸಿಗುವುದು ಕಷ್ಟವಾಗುತ್ತಿದೆಯಂತೆ.
ಕಾಲಿಟ್ಟರೆ ರಕ್ತ: ಖಾಲಿ ಲೇಔಟ್ಗಳು ರಾತ್ರಿ ಮದ್ಯವ್ಯಸನಿಗಳಿಗೆ ಎಣ್ಣೆ ಹೊಡೆಯುವ ಅಡ್ಡೆಗಳಾದರೆ ಬೆಳಗಿನ ಜಾವ ಹಾಗೂ ಸಂಜೆ ಸಮಯ ವಾಯು ವಿಹಾರಿಗಳ ತಾಣವಾಗಿವೆ. ಆದರೆ, ಇತ್ತೀಚೆಗೆ ಎಣ್ಣೆ ಹೊಡೆದು ಬಾಟಲ್ಗಳನ್ನು ಅಲ್ಲಿಯೇ ಬಿಸಾಕುವವರ ಸಂಖ್ಯೆ ಅಧಿಕವಾಗಿದೆ. ಕೆಲವರು ರಸ್ತೆ ನಡುವೆಯೇ ಬಾಟಲ್ಗಳನ್ನು ಒಡೆದು ಹಾಕುತ್ತಿದ್ದಾರೆ. ಇದರಿಂದಾಗಿ ಲೇಔಟ್ಗಳಲ್ಲಿ ಗಮನಹರಿಸದೆ ಓಡಾಡಿದರೆ ಕಾಲಿಗೆ ಬಾಟಲ್ನ ಗಾಜು ಚುಚ್ಚಿ ರಕ್ತ ಸೋರಿಕೆಯಾಗುವ ಘಟನೆಗಳು ನಡೆಯುತ್ತಿವೆ. ಹೀಗಾಗಿ, ವಾಯು ವಿಹಾರಿಗಳು ಲೇಔಟ್ಗಳ ಬಳಿ ಸುಳಿಯುವುದಕ್ಕೂ ಹೆದರುವ ಸ್ಥಿತಿ ನಿರ್ವಣವಾಗಿದೆ. ಆದರೆ, ಇದೇ ಮಾರ್ಗವಾಗಿ ಪೊಲೀಸರು, ಕಂದಾಯ, ನಗರಸಭೆ ಅಧಿಕಾರಿಗಳು ಸಂಚರಿಸುತ್ತಿದ್ದರೂ ಲೇಔಟ್ಗಳಲ್ಲಿ ಎಣ್ಣೆ ಹೊಡೆಯುವವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಲೇಔಟ್ ಮದ್ಯ ಸೇವಿಸುವವರಿಗೆ ಪಾಠ ಕಲಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇದ್ದಲ್ಲೇ ಸರ್ವಿಸ್: ಲೇಔಟ್ಗಳಲ್ಲಿ ಮದ್ಯ ಸೇವಿಸಲು ಬರುವವರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಕೆಲವರು ಅಕ್ರಮವಾಗಿ ಮದ್ಯವನ್ನು ಸಹ ಅಲ್ಲಿಯೇ ತಂದು ಕೊಡುತ್ತಿದ್ದಾರೆ. ಅದರೊಂದಿಗೆ ಸ್ನ್ಯಾಕ್ಸ್, ಸಾಫ್ಟ್ ಡ್ರಿಂಕ್ಸ್, ಊಟ, ಪಾನ್ ಮಸಾಲಾಗಳನ್ನು ಅಲ್ಲಿಯೇ ಮಾರಾಟ ಮಾಡುತ್ತಿದ್ದು, ಮದ್ಯ ಪ್ರಿಯರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ.
ಖಾಲಿ ಲೇಔಟ್ಗಳಲ್ಲಿ ಅನಧಿಕೃತ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಆಯಾ ಲೇಔಟ್ಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಪೊಲೀಸ್ ಇಲಾಖೆ ಹಾಗೂ ನಾವು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. | ಡಾ. ಎನ್. ಮಹಾಂತೇಶ, ರಾಣೆಬೆನ್ನೂರ ನಗರಸಭೆ ಆಯುಕ್ತ
ರಾಣೆಬೆನ್ನೂರ ನಗರದ ಹೊರವಲಯದಲ್ಲಿ ಉತ್ತಮ ಗಾಳಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ವಾಯುವಿಹಾರಕ್ಕೆ ಬಂದರೆ ಇಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳನ್ನು ನೋಡಿಯೇ ಓಡಾಡಲು ಹೆದರಿಕೆಯಾಗುತ್ತಿದೆ. ಇಂಥವರ ವಿರುದ್ಧ ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. | ಸುರೇಶ ಜಿ., ಹಿರಿಯ ನಾಗರಿಕ