More

    ನಾನೊಬ್ಬ ಸಾಮನ್ಯ ಕಾರ್ಯಕರ್ತ

    ಬಾಗಲಕೋಟೆ: ನಾನು ರಾಜ್ಯಸಭಾ ಸದಸ್ಯನಾದರೂ ನಾನೊಬ್ಬ ಸಾಮನ್ಯ ಕಾರ್ಯಕರ್ತ ನನ್ನ ಬೂತನ್ನು ಶಕ್ತಿಶಾಲಿಯಾಗಿಟ್ಟುಕೊಳ್ಳುವ ಕರ್ತವ್ಯ ನನ್ನದು ಎಂದು ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

    ಅವರು ಬಿ.ವ್ಹಿ.ವ್ಹಿ.ಸಂಘದ ಮಿನಿ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷ ವಿಧಾನಸಭಾ ಕ್ಷೇತ್ರದಿಂದ ಹಮ್ಮಿಕೊಂಡ ನೂತನ ರಾಜ್ಯಸಭಾ ಸದಸ್ಯರಿಗೆ ಸನ್ಮಾನ ಹಾಗೂ ಫಲಾನುಭವಿಗಳಗಳ ಸಂಪರ್ಕ ಅಭಿಯಾನದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.

    ಪಕ್ಷಕ್ಕೆ ನಿಷ್ಠನಾದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಉನ್ನತ ಹುದ್ದೆಯಗಳನ್ನೂ ನೀಡುವ ಏಕೈಕ ಪಕ್ಷ ಅದು ಭಾರತೀಯ ಜನಾತಾ ಪಾರ್ಟಿ ಯಾಗಿದೆ, ಇಂಥ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿರುದ್ದಕ್ಕೆ ನನಗೆ ಹೆಮ್ಮೆಯಿದೆ, ರಾಜ್ಯಸಭಾ ಸದಸ್ಯನಾದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ನನ್ನ ಬೂತಿನ ಸಶಕ್ತೀಕರಣದ ಕರ್ತವ್ಯವನ್ನು ನಾವೆ ವಹಿಸಿಕೊಳ್ಳವೆ,ಅದರಂತೆ ಪಕ್ಷದ ಪದಾಧೀಕಾರಿಗಳು,ಕಾರ್ಯಕರ್ತರು ತಮ್ಮ ತಮ್ಮ ಬೂತಿನ ಶಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು, ನಾವೂ ಬೂತ ಗೆದ್ದರೆ ದೇಶ ಗೆದ್ದಂತೆ, ಮೊತ್ತಮ್ಮೆ ಸನ್ಮಾನ್ಯ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಪಕ್ಷ ನನ್ನನ್ನು ಗುರುತಿಸಿ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿರುವುದಕ್ಕೆ ಪಕ್ಷದ ಎಲ್ಲ ಹಿರಿಯರಿಗೂ ಹಾಗೂ ಸದಾ ಜೊತೆಗೆ ಇರುವ ಹಿಂದಿನ ಶಾಸಕರು ಹಿರಿಯರು ಆದ ಡಾ.ವೀರಣ್ಣ ಚರಂತಿಮಠ ಅವರಿಗೆ ಧನ್ಯವಾದಗಳನ್ನು ಸಲ್ಲಿಸುವೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಂದಿನ ಶಾಸಕರಾದ ಡಾ.ವೀರಣ್ಣ ಚರಂತಿಮಠ, ನಾರಾಯಣಸಾ ಭಾಂಡಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದರಿಂದ ಜಿಲ್ಲೆಯಲ್ಲಿ ಬಿಜೆಪಿ ಗೆಮತ್ತಷ್ಷು ಬಲ ಬಂದಿದೆ, ಒಬ್ಬ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇದೆ ಎನ್ನುವುದ್ಕೆ ಭಾಂಡಗೆ ಅವರೆ ಸಾಕ್ಷಿಯಾಗಿದ್ದಾರೆ, ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಮೊತ್ತಮ್ಮೆ ಸನ್ಮಾನ್ಯ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣ,ದೇಶದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರೋಣ, ಭಾರತ ವಿಶ್ವಗುರುವಾಗಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾದ್ಯ, ದೇಶದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿ ಹಾಗೂ ನರೇಂದ್ರ ಮೋದಿಜಿ ಅಗತ್ಯವಾಗಿದೆ. ಮೋದಿ ಗೆದ್ದರೆ ದೇಶ ಗೆದ್ದಂತೆ, ದೇಶ ಗೆದ್ದರೆ ಇಡಿ ವಿಶ್ವವೆ ಗೆದ್ದಂತೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ,ರಾಜು ರೇವಣಕರ, ನಗರಮಂಡಲ ಅಧ್ಯಕ್ಷ ಸದಾನಂದ ನಾರಾ, ವೀರಣ್ಣ ಹಳೆಗೌಡರ,ಗುಂಡುರಾವ ಶಿಂಧೆ, ಮಹೇಶ ಅಥಣಿ,ಗುರುಬಸವ ಸೂಳಿಬಾವಿ,ಮಹಾಂತೇಶ ಶೇಟ್ಟರ, ಸತ್ಯನಾರಾಯಣ ಹೇಮಾದ್ರಿ, ರಾಜು ಮುದೇನೂರ,ಶಿವಾನಂದ ಟವಳಿ,ಶ್ರೀಮತಿ ಭಾಗ್ಯಶ್ರಿ ಹಂಡಿ,ಅನಿತಾಸರೋದೆ,ಶಶಿಕಲಾ ಸುರೇಶ ಮಜ್ಜಗಿ,ಶೋಭಾ ರಾವ, ಬಸವರಾಜ ಹುನಗುಂದ,ಉಮೇಶ ಹಂಚಿನಾಳ, ಮಲ್ಲಿಕಾರ್ಜುನ ಕಾಂಬಳೆ,ನಾಗರಾಜ ನಾರಯಣಕರ,ಪ್ರಭು ಹಡಗಲಿ,ಸಾಗರ ಬಂಡಿ,ಬಸವರಾಜ ಅವರಾದಿ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts