More

    ನಮಗೂ ಆರ್ಥಿಕ ನೆರವು ನೀಡಿ

    ಗದಗ: ಕರೊನಾ ಲಾಕ್​ಡೌನ್​ನಿಂದ ರಾಜ್ಯಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ನಿಲ್ಲಿಸಲಾಗಿದೆ. ಸಮಾಜದಲ್ಲಿ ಧಾರ್ವಿುಕ ಚಟುವಟಿಕೆಗಳೂ ಸ್ಥಗಿತಗೊಂಡು ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಅರ್ಚಕರು, ಪುರೋಹಿತರಿಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ವೀರಶೈವ ಜಂಗಮ ಅರ್ಚಕರು ಮತ್ತು ಪುರೋಹಿತರ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

    ಧರ್ಮ ಪ್ರಚಾರ, ತತ್ತ್ವ ಬೋಧನೆ, ಸೈದ್ಧಾಂತಿಕ ವಿಚಾರ, ಪೂಜೆ ಪುನಸ್ಕಾರಗಳನ್ನು ನಿರಂತರವಾಗಿ ಮಾಡುತ್ತಿರುವ ಅರ್ಚಕರು ಮತ್ತು ಪುರೋಹಿತರು ಕರೊನಾ ಸಂದರ್ಭದಲ್ಲಿ ಕುಟುಂಬ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಅರ್ಚಕರು, ಪುರೋಹಿತರು, ಜಂಗಮ ಬಾಂಧವರಿಗೆ ಸರ್ಕಾರ ಕೂಡಲೇ ನೆರವು ನೀಡುವುದರೊಂದಿಗೆ ಜೀವನ ನಡೆಸಲು ಅಗತ್ಯವಾಗಿರುವ ಆಹಾರಧಾನ್ಯ, ದಿನಸಿ ಕಿಟ್​ಗಳನ್ನು ವಿತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಶರಣಯ್ಯಶಾಸ್ತ್ರಿ ಶಿವಪ್ಪಯ್ಯನಮಠ, ಗುರುಸಿದ್ದಯ್ಯ ಹಿರೇಮಠ, ಫಕ್ಕೀರಯ್ಯಶಾಸ್ತ್ರಿ ಕಲ್ಯಾಣಮಠ, ಚನ್ನಬಸಯ್ಯ ಹೇಮಗಿರಿಮಠ, ಸಿದ್ದಲಿಂಗಯ್ಯ ಹಿರೇಮಠ, ಮಲ್ಲಯ್ಯ ಮುತ್ತಿನಪೆಂಡಿಮಠ, ಸದಾಶಿವಯ್ಯ ಹಿರೇಮಠ, ಶರಣಯ್ಯ ಯಾವಗಲ್ಲಮಠ, ಸದಾಶಿವಯ್ಯ ಹಿರೇಮಠ, ನಾಗಸಮುದ್ರ ಗ್ರಾಮದ ಲಿಂಗಯ್ಯ ಹಿರೇಮಠ, ಹಿರೇಕೊಪ್ಪ ಗ್ರಾಮದ ಶರಣಯ್ಯ ಹಿರೇಮಠ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts