More

    ದೇಶ ರಕ್ಷಣೆಗೆ ನೌಕಾಸೇನೆ ಸನ್ನದ್ಧ

    ಕಾರವಾರ: ಭಾರತೀಯ ನೌಕಾಸೇನೆ ದೇಶ ರಕ್ಷಣೆ, ಸೇವೆಗೆ ಸದಾ ಸನ್ನದ್ಧವಾಗಿದೆ ಎಂದು ನೌಕಾ ಶಸ್ತ್ರಾಗಾರ ಐಎನ್​ಎಸ್ ವಜ್ರಕೋಶನ ಮುಖ್ಯಸ್ಥ ಕ್ಯಾಪ್ಟನ್ ಸಜು ಜಾಯ್ ಹೇಳಿದರು.

    ನಗರದ ಟ್ಯಾಗೋರ್ ತೀರದ ಚಪಲ್ ಯುದ್ಧ ನೌಕಾ ವಸ್ತು ಸಂಗ್ರಹಾಯಲಯ ಆವರಣದಲ್ಲಿ ಬುಧವಾರ ಸೈನಿಕ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಆಯೋಜಿಸಿದ್ದ ವಿಜಯ ದಿವಸ ಕಾರ್ಯಕ್ರಮ ಉದ್ಘಾಟಿಸಿ, ಪರಮವೀರಚಕ್ರ ರಾಮಾ ರಾಘೊಬಾ ರಾಣೆ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

    ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಮಾತನಾಡಿ, ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿದ ವೀರ ಯೋಧರ ಕಾರ್ಯ ಸ್ಮರಣೀಯ. ರಕ್ಷಣಾ ಇಲಾಖೆಯ ಎಲ್ಲ ಕಾರ್ಯಗಳಿಗೆ ಬೆಂಬಲ ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದರು. ಎಸ್​ಪಿ ಶಿವಪ್ರಕಾಶ ದೇವರಾಜು, ಜಿಪಂ ಸಿಇಒ ಪ್ರಿಯಾಂಗಾ ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಎನ್​ಸಿಸಿ ನೌಕಾ ಘಟಕದ ಮುಖ್ಯಸ್ಥ ಕಮಾಂಡರ್ ಸತ್ಯನಾಥ ಭೋಸ್ಲೆ, ಭು ಸೇನಾ ಎನ್​ಸಿಸಿ ಕಮಾಂಡರ್ ಸಮೀರ ಪವಾರ್, ಸೈನಿಕ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕಮಾಂಡರ್ ಇಂದುಪ್ರಭಾ ಇದ್ದರು. ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    ರಾಜ್ಯದಲ್ಲಿ ದ್ವಿತೀಯ|
    ನಿವೃತ್ತ ಸೈನಿಕರ ನೆರವಿಗೆ ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ಸೇನಾ ಧ್ವಜವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸೇನಾ ಧ್ವಜ ಮಾರಾಟ ಮಾಡಿ ಹಣ ಸಂಗ್ರಹಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ 2 ನೇ ಸ್ಥಾನದಲ್ಲಿದೆ. ಕಳೆದ ಸಾಲಿನಲ್ಲಿ 5 ಲಕ್ಷ ರೂ. ಗುರಿ ಇದ್ದು, 6.34 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು. ಯುದ್ಧಗಳಲ್ಲಿ ಹುತಾತ್ಮರಾದ ಯೋಧರ ಸಂಬಂಧಿಕರಾದ ಮನೊರತಿಬಾಯಿ, ಗಂಗಾಬಾಯಿ, ಸುಧಾ ರಾಣೆ, ಪ್ರದೀಪ, ರೇಷ್ಮಾ, ಕಮಲಾ ಬಾಯಿ, ಅನ್ನಪೂರ್ಣ, ವಿದ್ಯಾ ನಾಯ್ಕ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನೌಕಾ ಬ್ಯಾಂಡ್ ಪ್ರದರ್ಶನ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts