More

    ದೇವನಮನೆ ರಸ್ತೆಯಲ್ಲಿ ಕರಡಿ ದೃಶ್ಯ ಸೆರೆ

    ವಿಜಯವಾಣಿ ಸುದ್ದಿಜಾಲ ಶಿರಸಿ

    ತಾಲೂಕಿನ ದೇವನಳ್ಳಿ ಭಾಗದಲ್ಲಿ ಇತ್ತೀಚೆಗೆ ಕರಡಿಯೊಂದು ವ್ಯಕ್ತಿಯನ್ನು ಬಲಿಪಡೆದ ಘಟನೆ ಮಾಸುವ ಮುನ್ನವೇ ಪ್ರವಾಸಿಗರೊಬ್ಬರ ಕಾಮರಾಕ್ಕೆ ದೇವನಮನೆ ಅರಣ್ಯದಂಚಿನ ರಸ್ತೆಯಲ್ಲಿ ಕರಡಿಯೊಂದು ಸೆರೆ ಸಿಕ್ಕಿದೆ. ಇದರಿಂದ ಈ ಭಾಗದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

    ಯಾಣ ಸಮೀಪದ ದೇವನಮನೆ ಭಾಗದ ಗ್ರಾಮದಲ್ಲಿ ಭಾನುವಾರ ಕರಡಿ ಓಡಾಡಿದೆ. ವಡ್ಡಿ ಘಟ್ಟದ ಮೂಲಕ ಗೋಕರ್ಣಕ್ಕೆ ತೆರಳುವ ವೇಳೆ ಬೆಂಗಳೂರಿನ ಪ್ರವಾಸಿಗ ರಾಜೇಶ ಹೆಗಡೆ ಈ ಚಿತ್ರ ಸೆರೆ ಹಿಡಿದಿದ್ದಾರೆ.

    ಈ ಭಾಗದಲ್ಲಿ ಕರಡಿ ಸಂಚಾರ ಹೊಸದೇನಲ್ಲ. ಕಳೆದ ಮೂರು ವರ್ಷಗಳಿಂದ ಕರಡಿ ಕಾಟ ಇದೆ. ಜನರು ಎಚ್ಚರಿಕೆಯಿಂದ ತಿರುಗಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ದೇವನಳ್ಳಿ ಭಾಗದಲ್ಲಿ ಕರಡಿಯೊಂದು ವ್ಯಕ್ತಿಯನ್ನು ಬಲಿಪಡೆದಿತ್ತು. ಈ ಕಾರಣ ಗ್ರಾಮಸ್ಥರು ಜೀವ ಭಯದಲ್ಲಿದ್ದಾರೆ. ಜತೆಗೆ ಏನಾದರೂ ಅನಾಹುತವಾಗುವ ಮುನ್ನವೇ ಅರಣ್ಯ ಇಲಾಖೆ ಕರಡಿ ಬರದಂತೆ ತಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದಟ್ಟ ಕಾಡು ಪ್ರದೇಶವಾದ ಕಾರಣ ಕರಡಿ ಸಂಚಾರ ಸಾಮಾನ್ಯ. ಆದರೆ, ಇತ್ತೀಚೆಗೆ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಕರಡಿ ಘಟನೆ ನಡೆದಿದ್ದರಿಂದ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts