ಮದ್ದೂರು: ತಾಲೂಕಿನ ತೈಲೂರು ಗ್ರಾಮದಲ್ಲಿ ಶ್ರೀ ತೈಲೂರು ಅಮ್ಮನವರ ಕೊಂಡೋತ್ಸವ ಶನಿವಾರ ಶ್ರದ್ಧಾ, ಭಕ್ತಿಯಿಂದ ಜರುಗಿತು.
ಗ್ರಾಮದ ರಮೇಶ್ ಅವರು ಕರಗ ಹೊತ್ತುಕೊಂಡು ಹಾಯ್ದರು. ಕೊಂಡೋತ್ಸವ ಅಂಗವಾಗಿ ದೇವಾಲಯದಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಅಣ್ಣಿಹಾಗಲಹಳ್ಳಿ ಸೋಮಶೇಖರ್, ತೈಲೂರಮ್ಮ ಸೇವಾ ಟ್ರಸ್ಟ್ನ ಅಧ್ಯಕ್ಷ ಡಾ.ಟಿ.ಚಂದ್ರು ಇತರರು ಇದ್ದರು.