More

    ತೀರ್ಥಹಳ್ಳಿ: ಧಾರಾಕಾರ ಮಳೆ; ಕಳ್ಳಿಗದ್ದೆ-ಸಂಕಲಾಪುರ ಸಂಪರ್ಕ ಕಡಿತ

    ತೀರ್ಥಹಳ್ಳಿ: ಕೇವಲ ಆರು ತಿಂಗಳ ಹಿಂದಷ್ಟೇ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಹಣಗೆರೆ ಗ್ರಾಪಂ ವ್ಯಾಪ್ತಿಯ ಕಳ್ಳಿಗದ್ದೆ ಹಳ್ಳದ ತಡೆಗೋಡೆ ಕುಸಿದಿದ್ದು, ಕಳ್ಳಿಗದ್ದೆ-ಸಂಕಲಾಪುರ ಸಂಪರ್ಕ ಕಡಿತಗೊಂಡಿದೆ.
    ಫೆಬ್ರವರಿ ತಿಂಗಳಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಸೋಮವಾರ ರಾತ್ರಿ ಸುರಿದ ಮಳೆಯಿಂದ ಹಾನಿಗೀಡಾಗಿದೆ. ಇದರಿಂದ ರಸ್ತೆಗೂ ಹಾನಿಯಾಗಿದೆ. ವಾಹನ ಸಂಚಾರಕ್ಕೂ ಅವಕಾಶ ಇಲ್ಲದಂತೆ ಮೋರಿ ಸಮೇತ ರಸ್ತೆ ಕೊಚ್ಚಿಹೋಗಿದೆ. ಕಳಪೆ ಕಾಮಗಾರಿಯಿಂದಾಗಿ ಕಳ್ಳಿಗದ್ದೆ-ಸಂಕಲಾಪುರ ಸಂಪರ್ಕ ರಸ್ತೆ ಕಡಿತಗೊಂಡಿದೆ. ಜತೆಗೆ ಕಳ್ಳಿಗದ್ದೆಯಿಂದ ಸಂಕಲಾಪುರ, ಅಲಸೆ, ಕುಣಿಗದ್ದೆ, ಬುಕ್ಕಿವರೆ, ಹುಂಚ ಸಂಪರ್ಕವೂ ಇಲ್ಲದಂತಾಗಿದೆ. ಕೂಡಲೇ ದುರಸ್ತಿ ಕಾರ್ಯ ಮಾಡುವಂತೆ ಹಣಗೆರೆ ಗ್ರಾಪಂನಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts